ಕೊಡಗಿನಲ್ಲಿ ಸೆರೆಯಾಯ್ತು ಹೆಬ್ಬುಲಿ

Suvarna News   | Asianet News
Published : Mar 15, 2020, 02:31 PM IST
ಕೊಡಗಿನಲ್ಲಿ ಸೆರೆಯಾಯ್ತು ಹೆಬ್ಬುಲಿ

ಸಾರಾಂಶ

ಮಡಿಕೇರಿಯಲ್ಲಿ ಗ್ರಾಮಸ್ಥರ ನೆಮ್ಮದಿ ಕೆಡಿಸಿದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕೊಡಗಿನಲ್ಲಿ ಹಸು ಕರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.  

ಕೊಡಗು(ಮಾ.15): ಮಡಿಕೇರಿಯಲ್ಲಿ ಗ್ರಾಮಸ್ಥರ ನೆಮ್ಮದಿ ಕೆಡಿಸಿದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಕೊಡಗಿನಲ್ಲಿ ಹಸು ಕರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಗಾಯಗೊಂಡಿದ್ದ ಹುಲಿ ಸೆರೆಯಾಗಿದ್ದು, ವೀರಾಜಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಹೆಬ್ಬುಲಿ ಸೆರೆಯಾಗಿದೆ. ಗ್ರಾಮದ ಕೆರೆಯ ಬಳಿಯಿದ್ದ ಎಂಟು ವರ್ಷದ ಗಂಡು ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.

ಹುಟ್ಟೂರಲ್ಲೇ ರದ್ದಾಯ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರೋಗ್ರಾಂ

ಸೆರೆಯಾದ ಹುಲಿ ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದ್ದು, ಸಿಸಿಎಫ್ ಹೀರಾಲಾಲ್ ಸೇರಿದಂತೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ , ಪರಿಶೀಲನೆ ನಡೆಸಿದ್ದಾರೆ. ಹುಲಿಯ ಕಾಲಿನ ಭಾಗದಲ್ಲಿ ಗಾಯ ಕಂಡುಬಂದಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು