ದೇವಾಲಯದ ಆವರಣ ಅಸ್ತವ್ಯಸ್ತ : ನಾಗ ವಿಗ್ರಹದ ಕೆಳಗಿತ್ತಾ ನಿಧಿ?

Published : Dec 15, 2019, 12:27 PM IST
ದೇವಾಲಯದ ಆವರಣ ಅಸ್ತವ್ಯಸ್ತ : ನಾಗ ವಿಗ್ರಹದ ಕೆಳಗಿತ್ತಾ ನಿಧಿ?

ಸಾರಾಂಶ

ಆ ದೇಗುಲದ ನಾಗರ ವಿಗ್ರಹದ ಕೆಳಗಿತ್ತಾ ಪ್ರಾಚೀನ ನಿಧಿ, ಇದರಿಂದಾಗಿಯೇ ದೇವಾಲಯದ ಆವರಣ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಏನಿದು ವಿಚಾರ? 

ಚಿತ್ರದುರ್ಗ [ಡಿ.15]:  ದೇಗುಲದಲ್ಲಿ ಭೂಮಿಯನ್ನು ಅಗೆದು ನಾಗರ ವಿಗ್ರಹವನ್ನು ವಿರೂಪಗೊಳಿಸಿದ ಘಟನೆ ಚಿತ್ರದುರ್ಗದಲ್ಲಾಗಿದೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕ್ಯಾತನಮಳೆ ಗ್ರಾಮದ ಮಹಾಲಿಂಗೇಶ್ವರ ದೇಗುಲದಲ್ಲಿ ನಿಧಿಗಾಗಿ ನೆಲವನ್ನು ಅಗೆದಿದ್ದು, ನಾಗ ದೇವರ ವಿಗ್ರಹ ವಿರೂಪಗೊಳಿಸಲಾಗಿದೆ. 

ರಾತ್ರಿ ವೇಳೆ ಸ್ಥಳದಲ್ಲಿ ನಿಧಿಗಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ದೇಗುಲದ ಆವರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತ ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಗುಲದ ಆವರಣವನ್ನು ಅಗೆದ ಸಂಬಂಧ ಇದೀಗ ಇಲ್ಲಿನ ಅಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಈ ಹಿಂದೆಯೂ ಅನೇಕ ದೇಗುಲಗಳಲ್ಲಿ ಹುಂಡಿಗಳನ್ನು ಒಡೆದು ಕಳ್ಳತನವನ್ನೂ ಕೂಡ ಮಾಡಲಾಗಿತ್ತು. ಇದೀಗ ನಿಧಿಯ ಆಸೆಗಾಗಿ ದೇವಾಲಯದ ಆವರಣವನ್ನು ಕಿತ್ತು ಹಾಕಲಾಗಿದೆ.

PREV
click me!

Recommended Stories

ರಾಮನಗರದಲ್ಲಿ ತಯಾರಾದ ಖೋಟಾ ನೋಟು ಯಾವುದಕ್ಕೆ ಬಳಸಲಾಗ್ತಿತ್ತು ಗೊತ್ತಾ? ಪೊಲೀಸರಿಂದ ಸೀಕ್ರೆಟ್ ರಿವೀಲ್!
ಗುಂಡ್ಲುಪೇಟೆಯಲ್ಲಿ ದೇಶದ ಮೊದಲ ಎಐ ಮೈಕ್ರೋಡೇಟಾ ಕೇಂದ್ರ: ಹೊಸ ಶಕೆ ಆರಂಭ Chamarajanagar