ತಂದೆ ಶವಸಂಸ್ಕಾರಕ್ಕೆ ಹೂ ತರಲು ಹೋದ ಮಗನೂ ಸಾವು

Published : Mar 15, 2021, 02:46 PM IST
ತಂದೆ ಶವಸಂಸ್ಕಾರಕ್ಕೆ ಹೂ ತರಲು ಹೋದ ಮಗನೂ ಸಾವು

ಸಾರಾಂಶ

ತಂದೆಯ  ಸಾವಿನ ಬಳಿಕ ಶವಸಂಸ್ಕಾರಕ್ಕೆ ಹೂ ತರಲು ಹೋದ ಮಗನೂ ಸಾವಿಗೀಡಾದ ಘಟನೆ ಶಿರಸಿಯಲ್ಲಿ ನಡೆದಿದೆ. ಒಂದೇ ದಿನ ತಂದೆ ಮಗ ಇಬ್ಬರೂ ಮೃತರಾಗಿದ್ದಾರೆ. 

ಕಾರವಾರ (ಮಾ.15):  ತಂದೆಯ ಶವಸಂಸ್ಕಾರಕ್ಕೆ ಹೂ ತರಲು ಹೋದ ಮಗನೂ ಸಾವಿಗೀಡಾದ ಘಟನೆ ಶಿರಸಿಯಲ್ಲಿ  ನಡೆದಿದೆ.  

ಶಿರಸಿಯಲ್ಲಿ ನಡೆದ ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಲ್ಲಿ ದುರ್ಘಟನೆ ಸಂಭವಿಸಿದೆ.  ಶವಸಂಸ್ಕಾರಕ್ಕೆ ಹೂ ತರಲು ಹೋದ  ಇಬ್ಬರು ಅಪಘಾತದಲ್ಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಉತ್ತರಕನ್ನಡ ಜಿಲ್ಲೆ ಶಿರಸಿಯ ಎಸ್ಬಿಐ ಸರ್ಕಲ್ ಬಳಿ ಘಟನೆ ನಡೆದಿದೆ. 

ಹುಬ್ಬಳ್ಳಿ: ಕೌಟುಂಬಿಕ ಕಲಹ, ಹೆಂಡತಿಯನ್ನೇ ಕೊಂದ ಪಾಪಿ ಗಂಡ

ಗಣೇಶನ ಗರದ ರವಿಚಂದ್ರ ವಡ್ಡರ್ (34), ಸುನೀಲ ಇಂದೂರ (26)  ಮೃತಪಟ್ಟಿದ್ದಾರೆ.  ರವಿಚಂದ್ರ ತಂದೆ ಹನುಮಂತಪ್ಪ ಇಂದು ನಸುಕಿನ ಬೆಳಗ್ಗೆ ಮೃತಪಟ್ಟಿದ್ದರು. ಅವರ ಶವ ಸಂಸ್ಕಾರಕ್ಕಾಗಿ ಹೂ ತರಲು ರವಿಚಂದ್ರ ಹಾಗೂ ಸುನೀಲ್ ಬೈಕ್‌ನಲ್ಲಿ ತೆರಳುತ್ತಿದ್ದರು ಈ ವೇಳೆ ಎದುರಿನಿಂದ ಬಸ್ ಡಿಕ್ಕಿ ಹೊಡೆದು ಅಪಘಾತವಾಗಿದೆ. 

ಸ್ಥಳಕ್ಕೆ ಡಿವೈಎಸ್‌ಪಿ ರವಿ ನಾಯ್ಕ್ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಮಾಡಿದ ಇಲಿ; ಚಿಕನ್ ಅಂಗಡಿ ಗಲ್ಲಾಪೆಟ್ಟಿಗೆಯಿಂದ ಹಣ ಕದ್ದೊಯ್ದು ಬಿಲದಲ್ಲಿಟ್ಟ ಮೂಷಿಕ!
Cauvery Water Dispute: ತಮಿಳುನಾಡಿನ ನೀರಿನ ದಾಹ ತೀರಿಸಿದ ಕಬಿನಿ; ಕೇವಲ 11 ದಿನಗಳಲ್ಲಿ ಹರಿಯಿತು 13 ಟಿಎಂಸಿ ನೀರು