ಹೊಸಪೇಟೆ: ಗಣಿ ಉದ್ಯಮಿ ಮನೆ-ಕಚೇರಿ ಮೇಲೆ ಎಸ್‌ಐಟಿ ದಾಳಿ

Kannadaprabha News   | Asianet News
Published : Sep 25, 2020, 01:59 PM IST
ಹೊಸಪೇಟೆ: ಗಣಿ ಉದ್ಯಮಿ ಮನೆ-ಕಚೇರಿ ಮೇಲೆ ಎಸ್‌ಐಟಿ ದಾಳಿ

ಸಾರಾಂಶ

ಜೋಳದರಾಶಿ ಗುಡ್ಡದ ಬಳಿಯ ಹೊಸ ಮನೆ ಹಾಗೂ ಕಾಲೇಜು ರಸ್ತೆಯಲ್ಲಿರುವ ಹಳೆಯ ಮನೆ ಮತ್ತು ಪ್ರಕಾಶ್‌ ನಗರದಲ್ಲಿರುವ ಕಚೇರಿಯ ಮೇಲೆ ಅಧಿಕಾರಿಗಳ ತಂಡ ದಾಳಿ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ಗಣಿ ಉದ್ಯಮಿ ರಾಣಿ ಸಂಯುಕ್ತಾ ಅವರ ಮನೆ| 

ಹೊಸಪೇಟೆ(ಸೆ.25): ಇಲ್ಲಿನ ಗಣಿ ಉದ್ಯಮಿ ರಾಣಿ ಸಂಯುಕ್ತಾ ಅವರ ಎರಡು ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ದಾಳಿ ನಡೆಸಿದ್ದು, ಗಣಿ ಉದ್ಯಮದ ವಿಚಾರವಾಗಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಇಲ್ಲಿನ ಜೋಳದರಾಶಿ ಗುಡ್ಡದ ಬಳಿಯ ಹೊಸ ಮನೆ ಹಾಗೂ ಕಾಲೇಜು ರಸ್ತೆಯಲ್ಲಿರುವ ಹಳೆಯ ಮನೆ ಮತ್ತು ಪ್ರಕಾಶ್‌ ನಗರದಲ್ಲಿರುವ ಕಚೇರಿಯ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. 

ನಿಲ್ಲದ ಕೊರೋನಾ ಕಾಟ: ಕೊಟ್ಟೂ​ರಲ್ಲಿ ಮನೆ ಮನೆಗೆ ಕೋವಿಡ್‌ ಟೆಸ್ಟ್‌

ದಾಳಿ ವೇಳೆ ರಾಣಿ ಸಂಯುಕ್ತಾ ಅವರು ಮನೆಯಲ್ಲಿರಲಿಲ್ಲ. ಈ ವೇಳೆ ಅವರ ಮೈದುನ ಯರ್ರಿಬಾಬು ಅವರನ್ನು ವಿಚಾರಣೆ ಮಾಡಿದ ತನಿಖಾ ತಂಡದ ಅಧಿಕಾರಿಗಳು, ಕೆಲ ಮಹತ್ವದ ದಾಖಲೆಗಳನ್ನು ತಂಡ ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.
 

PREV
click me!

Recommended Stories

ಉತ್ಖನನ ವೇಳೆ ನಿಧಿ ದೊರೆತರೆ ಲಕ್ಕುಂಡಿ ಗ್ರಾಮವೇ ಸ್ಥಳಾಂತರ?
Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!