ಸಿಂದಗಿ-ಇಂಡಿ-ಲಚ್ಯಾಣ-ಸೋಲಾಪುರಕ್ಕೆ ಕೊನೆಗೂ ಆರಂಭವಾದ ಬಸ್; ಯಶವಂತಗೌಡ ಪಾಟೀಲರು ಚಾಲನೆ

Published : May 23, 2026, 05:08 AM IST
Indi Solapur bus

ಸಾರಾಂಶ

ಇಂಡಿ ತಾಲೂಕಿನ ಲಚ್ಯಾಣ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಿಂದಗಿ-ಇಂಡಿ-ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಹೊಸ ಬಸ್ ಸೇವೆಗೆ ಶಾಸಕ ಯಶವಂತಗೌಡ ಪಾಟೀಲರು ಚಾಲನೆ ನೀಡಿದರು. ಈ ಬಸ್ಸು ಸಿದ್ದಲಿಂಗೇಶ್ವರ ಭಕ್ತರಿಗೆ, ವ್ಯಾಪಾರಸ್ಥರಿಗೆ ಮತ್ತು ನೌಕರರಿಗೆ ಅನುಕೂಲವಾಗಲಿದೆ.

ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ದಲಿಂಗೇಶ್ವರ ಭಕ್ತರ ವ್ಯಾಪಾರಸ್ಥರ ನೌಕರರ ಬಹುದಿನಗಳ ಬೇಡಿಕೆಗೆ ಶಾಸಕ ಯಶವಂತಗೌಡ ಪಾಟೀಲರು ಸ್ಪಂದಿಸಿ ಸಿಂದಗಿಯಿಂದ ಇಂಡಿ ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಬಸ್ಸಿಗೆ ಚಾಲನೆ ನೀಡಿದರು.

ಬಸ್ ಸಮಯ

ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಸೋಲಾಪುರ ಮತ್ತು ಮಹಾರಾಷ್ಟ್ರದ ವಿವಿಧ ಕಡೆಯಿಂದ ಬರುವ ಭಕ್ತರಿಗೆ ಈ ಬಸ್ಸು ಅನುಕೂಲವಾಗುತ್ತದೆ. ಸಿಂದಗಿಯಿಂದ ಮಧ್ಯಾಹ್ನ 2 ಗಂಟೆಗೆ ಬಿಟ್ಟು, ಇಂಡಿಯಿಂದ 3.45ಕ್ಕೆ ಬಿಡುವ ಬಸ್ಸು ಲಚ್ಯಾಣ 4 ಗಂಟೆಗೆ, ಅಹಿರಸಂಗ, ಭೈರುಣಗಿ, ಭತಗುಣಕಿ, ಹಲಸಂಗಿ, ಧೂಳಖೇಡ ಮಾರ್ಗವಾಗಿ ಸೋಲಾಪುರ ತಲುಪುವದು. ಸೋಲಾಪುರದಿಂದ ಸಂಜೆ 7 ಗಂಟೆಗೆ ಬಿಡುವ ಬಸ್ಸು ಇದೇ ಮಾರ್ಗದಲ್ಲಿ ಇಂಡಿಯಿಂದ ಸಿಂದಗಿ ಹೋಗಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಮಹಾದೇವಪ್ಪ ಏವೂರ, ಘಟಕ ವ್ಯವಸ್ಥಾಪಕ ನಡುವಿನಮನಿ ಮತ್ತಿತರಿದ್ದರು.

PREV
Read more Articles on
click me!

Recommended Stories

ಸಂಜೆ 5.30ಕ್ಕೆ ಬೆಳಗಾವಿ ವಿಟಿಯು ಪರೀಕ್ಷೆ ಅಂತ್ಯ, ಸಂಜೆ 5.40ಕ್ಕೆ ರಿಸಲ್ಟ್‌ ; ಹತ್ತೇ ನಿಮಿಷಕ್ಕೆ ಫಲಿತಾಂಶ
Rain: ರಾಜಧಾನಿ ಬೆಂಗಳೂರಿನಲ್ಲಿ ಸುರಿದ 1 ಗಂಟೆಯ ಮಳೆಗೆ 150ಕ್ಕೂ ಹೆಚ್ಚು ಮರ ಧರೆಗೆ