ವಿಜಯಪುರ: ಕೌದೇಶ್ವರ ಮಠದ ಪೀಠಾಧಿಪತಿ ಶ್ರೀ ಸತ್ಯಪ್ಪ ಮಹಾರಾಜರು ಲಿಂಗೈಕ್ಯ

Published : Jan 02, 2020, 12:10 PM IST
ವಿಜಯಪುರ: ಕೌದೇಶ್ವರ ಮಠದ ಪೀಠಾಧಿಪತಿ ಶ್ರೀ ಸತ್ಯಪ್ಪ ಮಹಾರಾಜರು ಲಿಂಗೈಕ್ಯ

ಸಾರಾಂಶ

ಕೌದೇಶ್ವರ ಮಠದ ಪೀಠಾಧಿಪತಿ ಶ್ರೀ ಸತ್ಯಪ್ಪ ಮಹಾರಾಜರು ಲಿಂಗೈಕ್ಯ| ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಜಿಗಜೀವಣಿ ಗ್ರಾಮದಲ್ಲಿರುವ ಕೌದೇಶ್ವರ ಮಠ| ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀ ಸತ್ಯಪ್ಪ ಮಹಾರಾಜರು|ಭಾಗದಲ್ಲಿರುವ ಕೈಲಾಸ ಆಶ್ರಮದಲ್ಲಿ ಶ್ರೀ ಸತ್ಯಪ್ಪ ಮಹಾರಾಜರ ಅಂತ್ಯಕ್ರಿಯೆ|

ವಿಜಯಪುರ(ಜ.02):  ಜಿಲ್ಲೆ ಇಂಡಿ ತಾಲೂಕಿನ ಜಿಗಜೀವಣಿ ಗ್ರಾಮದ ಕೌದೇಶ್ವರ ಮಠದ ಪೀಠಾಧಿಪತಿ ಶ್ರೀ ಸತ್ಯಪ್ಪ ಮಹಾರಾಜರು ಇಂದು(ಗುರುವಾರ) ಲಿಂಗೈಕ್ಯರಾಗಿದ್ದಾರೆ. 

82 ವರ್ಷದ ಶ್ರೀ ಸತ್ಯಪ್ಪ ಮಹಾರಾಜರು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ರೀ ಸತ್ಯಪ್ಪ ಮಹಾರಾಜರು ಹಸರೀಕರಣ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು.  ಇಂದು ಮಧ್ಯಾಹ್ನ 2 ಗಂಟೆಗೆ ಜಿಗಜೀವಣಿ ಗ್ರಾಮದ ಹೊರ ಭಾಗದಲ್ಲಿರುವ ಕೈಲಾಸ ಆಶ್ರಮದಲ್ಲಿ ಶ್ರೀ ಸತ್ಯಪ್ಪ ಮಹಾರಾಜರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀಗಳ ಅಗಲಿಕೆಗೆ ವಿವಿಧ ಮಠಾಧೀಶರು, ಗಣ್ಯರು, ರಾಜಕಾರಣಿಗಳು ಹಾಗೂ ಭಕ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. 
 

PREV
click me!

Recommended Stories

ಬೆಳಿಗ್ಗೆ ವೇಕ್-ಅಪ್ ಕಾಲ್, ಮನೆ ಬಾಗಿಲಿಗೇ ಕಾರ್: ಬೆಂಗಳೂರು ಏರ್‌ಪೋರ್ಟ್‌ನಿಂದ ಡೋರ್-ಟು-ಡೋರ್ ಐಷಾರಾಮಿ ಸೇವೆ
ಶ್ರೀಕೃಷ್ಣ ಜನ್ಮದಿನ ಮಳೆ ಬರುತ್ತದೆಯೇ? ಜ್ಯೋತಿಷ್ಯ ಶಾಸ್ತ್ರದ ಈ ನಂಬಿಕೆ ಇಂಟರೆಸ್ಟಿಂಗ್