ಸಿಎಂ ತವರಿನಲ್ಲಿದೆ 10 ವರ್ಷದಿಂದ ಡಾಂಬರು ಕಾಣದ ರಸ್ತೆ, ಬಸ್‌ ಸಂಚಾರವಿಲ್ಲದ ಊರು

Published : Aug 22, 2019, 11:26 AM IST
ಸಿಎಂ ತವರಿನಲ್ಲಿದೆ 10 ವರ್ಷದಿಂದ ಡಾಂಬರು ಕಾಣದ ರಸ್ತೆ, ಬಸ್‌ ಸಂಚಾರವಿಲ್ಲದ ಊರು

ಸಾರಾಂಶ

ಸಿಎಂಗಳ ತವರೂರಲ್ಲಿ 10 ವರ್ಷಗಳಿಂದ ರಸ್ತೆ ಡಾಂಬರು ನೋಡಿಲ್ಲ. ಗುಂಡಿಗಳಿಂದ ತುಂಬಿಹೋಗಿರುವ ರಸ್ತೆಯಲ್ಲಿ ಬಸ್‌ಗಳೂ ಓಡಾಡುವುದಿಲ್ಲ. ದುರಸ್ತಿ ಭಾಗ್ಯವನ್ನೇ ಕಾಣದ ರಸ್ತೆಯಿಂದಾಗಿ ಬಸ್‌ಗಳೂ ಒಡಾಡದೆ ಜನ ಓಡಾಡುವುದಕ್ಕೆ ಸಮಸ್ಯೆಯಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆಗಳಲ್ಲಿ ಓಡಾಡುವುದೇ ಸವಾಲು.

ಶಿವಮೊಗ್ಗ(ಆ.22): ಸೊರಬ ತಾಲೂಕಿನ ಜೋಗಳ್ಳಿ, ಎಲಿವಾಳ, ಬೆಣ್ಣಿಗೆರೆ ಮಾರ್ಗದ ಮೂಲಕ ಚಿಕ್ಕೇರಿಗೆ ತೆರಳುವ ಬಸ್‌ಗಳು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಸಂಚರಿಸುತ್ತಿಲ್ಲ. ಸತತ 10 ವರ್ಷಗಳಿಂದಲೂ ದುರಸ್ಥಿ ಕಾಣದ ಈ ರಸ್ತೆ ಬರೀ ಗುಂಡಿಗಳಿಂದ ತುಂಬಿಕೊಂಡಿದೆ.

ದ್ವಿಚಕ್ರ ವಾಹನ ಸವಾರರು ವಾಹನ ನಡೆಸಲು ಹರಸಾಹಸ ಪಡಬೇಕಿದೆ. ಈ ಮಾರ್ಗದಲ್ಲಿ ಬಸ್‌ ಚಲಾಯಿಸುವುದು ಸಾದ್ಯವೇ ಇಲ್ಲ ಎಂದು ಬಸ್‌ ಚಾಲಕ, ನಿರ್ವಾಹಕರು ಕೈಚೆಲ್ಲಿದ್ದಾರೆ. ಪ್ರಸ್ತುತ ಬಸ್‌ ಸಂಪರ್ಕವಿಲ್ಲದೆ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ.

ಶಿವಮೊಗ್ಗ: ನೆರೆ ಪರಿಹಾರ, ಪುನರ್ವಸತಿ ಕಾರ್ಯ ಚುರುಕು​

ರೈತಾಪಿ ವರ್ಗದವರು ಇಲ್ಲಿ ಹೆಚ್ಚಾಗಿದ್ದು, ಅವರುಗಳಿಗೆ ದಿನನಿತ್ಯದ ಅಗತ್ಯ ಸಾಮಾನು ಸರಂಜಾಮು ತರಲು ಹಾಗೂ ಕೃಷಿ ವ್ಯವಹಾರಗಳಿಗೆ ತೀವ್ರ ತೊಂದರೆಯಾಗಿದೆ. ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ಒಮ್ಮೆ ಈ ಮಾರ್ಗದಲ್ಲಿ ಬಂದು ಹೋಗಲಿ. ಇಲ್ಲಿನ ಸ್ಥಿತಿ ಗಮನಿಸಲಿ ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.

shivamogga bad road in soraba puts villagers into hardship

PREV
click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ