ಶಾಸಕ ರಾಮದಾಸ್ ಕಾರು ಅಪಘಾತ : ಬೈಕ್ ಸವಾರಗೆ ಗಾಯ

By Kannadaprabha NewsFirst Published Sep 6, 2019, 11:55 AM IST
Highlights

ಬೈಕ್ ಸವಾರಗೆ ಶಾಸಕ ರಾಮದಾಸ್ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ [ಸೆ.06]: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಕಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. 

ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ಬಳಿ ಘಟನೆ ನಡೆದಿದೆ.  

ಶಾಸಕ ರಾಮದಾಸ್ ಬೆಂಗಳೂರಿಗೆ ಆಗಮಿಸುತ್ತಿದ್ದ ವೇಳೆ ಮಂಡ್ಯ ತಾಲೂಕಿನ ಬಿಳಗೂಲಿ ಗ್ರಾಮದವರಾದ ಶಿವಣ್ಣ (52) ಅವರ ಬೈಕಿಗೆ ಕಾರು ಗುದ್ದಿದೆ. ತಿರುವು ತೆಗೆದುಕೊಳ್ಳುವ ವೇಳೆ ಕಾರು ಡಿಕ್ಕಿಯಾಗಿ ಶಿವಣ್ಣ ಗಾಯಗೊಂಡಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಪಘಾತದ ಬಳಿಕ ಶಾಸಕ ರಾಮದಾಸ್, ಆಟೋದಲ್ಲಿ ಗಾಯಾಳು ಶಿವಣ್ಣ ಅವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಬೆಂಗಳೂರಿಗೆ ತೆರಳಿದ್ದಾರೆ. ಮಂಡ್ಯ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!