ರಸ್ತೆ ಗುಂಡಿ ಮುಚ್ಚಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸಪ್ಪನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ!

Published : Dec 18, 2019, 01:21 PM IST
ರಸ್ತೆ ಗುಂಡಿ ಮುಚ್ಚಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸಪ್ಪನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ!

ಸಾರಾಂಶ

ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಗೆ ಮಣ್ಣು ಹಾಕಿದ ಟ್ರಾಫಿಕ್ ಪೊಲೀಸ್‌ ಪೇದೆ| ಟ್ರಾಫಿಕ್ ಪೊಲೀಸ್‌ ಪೇದೆಯ ಕಾರ್ಯದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್| ಸದಾಶಿವನಗರದ ಮುಖ್ಯರಸ್ತೆಯ ಮಧ್ಯೆ ಬಿದ್ದಿದ್ದ ಗುಂಡಿ ಮಣ್ಣು ಸುರಿದ ಪೊಲೀಸ್ ಪೇದೆ|  

ಬೆಂಗಳೂರು(ಡಿ.18): ರಸ್ತೆ ಮಧ್ಯೆ ಬಿದ್ದಿದ್ದ ಗುಂಡಿಗೆ ಮಣ್ಣು ಹಾಕುವ ಮೂಲಕ ಟ್ರಾಫಿಕ್ ಪೊಲೀಸರೊಬ್ಬರು ಕರ್ತವ್ಯ ನಿಷ್ಠೆ ಮೆರೆದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು(ಬುಧವಾರ) ನಡೆದಿದೆ. ಟ್ರಾಫಿಕ್ ಪೊಲೀಸರ ಕಾರ್ಯದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 

ನಗರದ ಸದಾಶಿವನಗರದ ಮುಖ್ಯರಸ್ತೆಯ ಮಧ್ಯೆ ಗುಂಡಿ ಬಿದ್ದಿದ್ದು, ಅದರಲ್ಲಿ ನೀರು ನಿಂತುಕೊಂಡು ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು, ಇದನ್ನ ಮನಗಂಡ ಟ್ರಾಫಿಕ್ ಪೊಲೀಸ್ ಪೇದೆ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯ ಮಾಡಲಿ ಅಂತ ಕಾಯದೆ ತಾವೇ ಸ್ವತಃ ಗುಂಡಿಗೆ ಮಣ್ಣು ಹಾಕುವ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕರ್ತವ್ಯ ನಿಷ್ಠೆ ಮೆರೆದ ಟ್ರಾಫಿಕ್ ಪೊಲೀಸ್ ಪೇದೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ, ಇಂತಹ ಜನ ಮೆಚ್ಚುವ ಕೆಲಸ ಮಾಡಿದ ಪೊಲೀಸ್ ಪೇದೆಯ ಹೆಸರು ಮಾತ್ರ ತಿಳಿದು ಬಂದಿಲ್ಲ. 
 

PREV
click me!

Recommended Stories

ಹುಬ್ಬಳ್ಳಿ ಗಣೇಶೋತ್ಸವ: ಫ್ಲೈಓವರ್ ದಾಟಲಿವೆಯೇ ಬೃಹತ್ ಗಣಪತಿಗಳು? ಪರ‍್ಯಾಯ ಮಾರ್ಗ
ನಗರದ ಶೇ.30 ಪೌರಕಾರ್ಮಿಕರು ಕೆಲಸಕ್ಕೆ ಚಕ್ಕರ್‌, ಮೂರು ಬಾರಿ ನೋಟಿಸ್‌ ಬಳಿಕ ವಜಾ: ಕೃಷ್ಣ ಬೈರೇಗೌಡ