ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ

Published : Oct 25, 2020, 08:53 AM IST
ಕೇಂದ್ರ ಕಾರಾಗೃಹದಲ್ಲಿ ಕೈದಿ ಆತ್ಮಹತ್ಯೆ

ಸಾರಾಂಶ

ಕೇಂದ್ರ ಕಾರಾಗೃಹದಲ್ಲಿ ಕೈದಿಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ

ಶಿವಮೊಗ್ಗ (ಅ.25): ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಂಜುನಾಥ್‌ (33) ಆತ್ಮಹತ್ಯೆ ಮಾಡಿಕೊಂಡವರು. ಸೋಗಾನೆಯಲ್ಲಿರುವ ಜೈಲಿನ ತುಂಗಾ ವಿಭಾಗದ ಕೊಠಡಿ ಸಂಖ್ಯೆ 35ರ ಶೌಚಾಲಯದಲ್ಲಿ ಅವರು ಟವೆಲ್‌ನಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮಾಹಿತಿ ತಿಳಿದ ಜೈಲಿನ ಸಿಬ್ಬಂದಿ ಕೂಡಲೇ ಮಂಜುನಾಥ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಸಾಗರದ ಎನ್‌.ಎಸ್‌.ಬಡಾವಣೆ ನಿವಾಸಿ ಮಂಜುನಾಥ್‌ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು.

ಹುತಾತ್ಮ ಯೋಧನ ಪುತ್ರಿ ದೂರು ಕೊಟ್ಟ 1 ಗಂಟೆಯಲ್ಲಿ ಆರೋಪಿ ಅರೆಸ್ಟ್ ..

ಆತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

PREV
click me!

Recommended Stories

Madhu Bangarappa: ನೀಟ್ ಪರೀಕ್ಷೆಯಿಂದ ಮಕ್ಕಳ ಭವಿಷ್ಯ ಹಾಳು; ರದ್ದು ಮಾಡಿದ್ರೆ ಒಳ್ಳೇದು ಎಂದ ಶಿಕ್ಷಣ ಸಚಿವ
ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು; ಸ್ವಾತಂತ್ರ್ಯ ದಿನಾಚರಣೆ ದಿನವೇ ರೈತರ ಪ್ರತಿಭಟನೆ