ಬಾಗಲಕೋಟೆ: ಮೈಕೈ ನೋವಿಗೆ ಕೊಡಲಿ ಏಟು ನೀಡುತ್ತಿದ್ದ ಪೂಜಾರಿ ಬಂಧನ..!

Published : Jul 14, 2024, 06:30 AM IST
ಬಾಗಲಕೋಟೆ: ಮೈಕೈ ನೋವಿಗೆ ಕೊಡಲಿ ಏಟು ನೀಡುತ್ತಿದ್ದ ಪೂಜಾರಿ ಬಂಧನ..!

ಸಾರಾಂಶ

ಜಕ್ಕಪ್ಪ ಸಿದ್ದಪ್ಪ ಪೂಜಾರಿ ಬಂಧಿತ ಆರೋಪಿ. ಈತನ ಬಳಿ ಮೈ, ಕೈ ನೋವು ಎಂದು ಬರುವ ಭಕ್ತರಿಗೆ ನೋವಾಗುವ ಭಾಗಕ್ಕೆ ಭಂಡಾರ ಹಚ್ಚಿ ಕೊಡಲಿಯಿಂದ ಹೊಡೆಯುತ್ತಿದ್ದ. ಪೂಜಾರಿ ಭಕ್ತನಿಗೆ ಕೊಡಲಿ ಏಟು ನೀಡುವ ದೃಶ್ಯ ವೈರಲ್ ಆಗಿದೆ.   

ಲೋಕಾಪುರ(ಜು.14):  ಮೈ, ಕೈ ನೋವು ಎಂದು ಬರುವ ಭಕ್ತರಿಗೆ ಕೊಡಲಿಯಿಂದ ಹೊಡೆದು ನೋವು ನಿವಾ ರಿಸುವುದಾಗಿ ಮೌಡ್ಯಾಚರಣೆ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿ ಲಿಂಗೇಶ್ವರ ದೇವಸ್ಥಾನದ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಕ್ಕಪ್ಪ ಸಿದ್ದಪ್ಪ ಪೂಜಾರಿ ಬಂಧಿತ ಆರೋಪಿ. ಈತನ ಬಳಿ ಮೈ, ಕೈ ನೋವು ಎಂದು ಬರುವ ಭಕ್ತರಿಗೆ ನೋವಾಗುವ ಭಾಗಕ್ಕೆ ಭಂಡಾರ ಹಚ್ಚಿ ಕೊಡಲಿಯಿಂದ ಹೊಡೆಯುತ್ತಿದ್ದ.ಪೂಜಾರಿಭಕ್ತನಿಗೆಕೊಡಲಿ ಏಟು ನೀಡುವ ದೃಶ್ಯ ವೈರಲ್ ಆಗಿದೆ. 

ಮುಧೋಳ: ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ, 4 ಲಾಡ್ಜ್‌ಗಳ ಮೇಲೆ ದಾಳಿ, 11 ಯುವತಿಯರ ರಕ್ಷಣೆ

ಹೊಡೆದ ಏಟಿಗೆ ಕೊಡಲಿ ಭಕ್ತನ ದೇಹದೊಳಗೆ ಹೋಗಿದ್ದು, ಹೊರತೆಗೆಯಲು ಪೂಜಾರಿ ಕಷ್ಟ ಪಡುತ್ತಿರುವುದನ್ನು ನೋಡಬಹುದು. ಇದನ್ನು ಅಂತ ಲೋಕಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

PREV
Read more Articles on
click me!

Recommended Stories

ನಟ ದರ್ಶನ್‌ಗೆ ಶುರುವಾಯ್ತು ಟೆನ್ಶನ್, ನಾಳೆ ಸಂಜೆ 4 ಗಂಟೆ ಆದೇಶ ಪ್ರಕಟಿಸಲಿದೆ ಹೈಕೋರ್ಟ್
Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!