ವಿಜಯಪುರ: ಸಾತಾಪುರದಲ್ಲಿ ವಾಂತಿ-ಭೇದಿ ಕಾಟ: ಆತಂಕದಲ್ಲಿ ಜನತೆ..!

Published : Jul 04, 2022, 12:30 AM IST
ವಿಜಯಪುರ: ಸಾತಾಪುರದಲ್ಲಿ ವಾಂತಿ-ಭೇದಿ ಕಾಟ: ಆತಂಕದಲ್ಲಿ ಜನತೆ..!

ಸಾರಾಂಶ

*  ಹೊಟ್ಟೆ ನೋವಿನಿಂದ ನರಳಾಡುತ್ತಿರೋ ಮಹಿಳೆಯರು, ಮಕ್ಕಳು *  ಆಸ್ಪತ್ರೆಗೆ ಇಂಡಿ ಶಾಸಕ ಯಶವಂತರಾಗೌಡ ದೌಡು *  24×7 ಕುಡಿಯುವ ನೀರೆ ಈ ಘಟನೆಗೆ ಮೂಲ?  

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜು.04):  ಜಿಲ್ಲೆಯ ಇಂಡಿ ತಾಲೂಕಿನ ಸಾತಪೂರ ಗ್ರಾಮದಲ್ಲಿ 40ಕ್ಕೂ ಅಧಿಕ ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಏಕಾಏಕಿ ಗ್ರಾಮದ ಕೆಲವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ನರಳಾಟ ಅನುಭವಿಸಿದ್ದಾರೆ. ಇದರಿಂದಾಗಿ ಇಡಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  

ಗ್ರಾಮಸ್ಥರಲ್ಲಿ ಕಾಣಿಸಿಕೊಂಡ ದಿಢೀರ್‌ ವಾಂತಿ-ಬೇದಿ

ಶುಕ್ರವಾರ ರಾತ್ರಿಯಿಂದಲೇ ಸಾತಾಪುರ ಗ್ರಾಮದಲ್ಲಿ ಕೆಲವರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ವಾಂತಿ-ಭೇದಿ ಶುರುವಾಗಿದೆ. ಇದು ಗ್ರಾಮದ 50 ಕುಟುಂಬಗಳ 40ಕ್ಕು ಅಧಿಕ ಜನರಲ್ಲಿ ಕಾಣಿಸಿಕೊಂಡಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು, ಯುವಕರಲ್ಲು ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಬಹುತೇಕರನ್ನು ಇಂಡಿ ತಾಲೂಕಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್‌ ಮಾಡಲಾಗಿದೆ. ಎಲ್ಲರಿಗು ಚಿಕಿತ್ಸೆಯನ್ನ ನೀಡಲಾಗ್ತಿದೆ.

ಜೂನ್‌ ಅಂತ್ಯಕ್ಕೆ ಅರ್ಧದಷ್ಟೂ ಭರ್ತಿಯಾಗದ ALMATTI DAM!

ಸಾತಾಪುರದಲ್ಲಿ ಆತಂಕದ ವಾತಾವರಣ

ದಿಢೀರ್‌ ಎಂದು ಗ್ರಾಮದ ಜನರಲ್ಲಿ ವಾಂತಿ-ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಸಾತಾಪುರ ಗ್ರಾಮದಲ್ಲಿ ಸಹಜವಾಗಿಯೇ ಆತಂಕ ವಾತಾವರಣ ಮೂಡಿದೆ. ಆರಂಭದಲ್ಲಿ 15-20 ಜನರಲ್ಲಿ ವಾಂತಿ-ಭೇದಿ, ಹೊಟ್ಟೆ ನೋವು ಕಾಣಿಸಿಕೊಂಡು ಬಳಿಕ 40 ಜನರ ವರೆಗು ವ್ಯಾಪಿಸಿಕೊಂಡಿದೆ. ಇದರಿಂದ ಆತಂಕ ಮೂಡಿದೆ.

ವಿಜಯಪುರದಲ್ಲಿ ಮಳೆಗಾಗಿ ಗ್ರಾಮಸ್ಥರಿಂದ ಭಜನೆ: ನಿರಂತರ ಶಿವಧ್ಯಾನ

ಆಸ್ಪತ್ರೆಗೆ ಇಂಡಿ ಶಾಸಕರ ಭೇಟಿ, ಆರೋಗ್ಯ ವಿಚಾರಣೆ

ಘಟನೆ ಬೆಳಕಿಗೆ ಬರ್ತಿದ್ದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೊಟ್ಟೆ ನೋವು, ವಾಂತಿ-ಭೇದಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಆತಂಕದಲ್ಲಿದ್ದ ರೋಗಿಗಳು ಹಾಗೂ ಪೋಷಕರು, ಸಾತಾಪುರ ಗ್ರಾಮಸ್ಥರಲ್ಲಿ ಶಾಸಕರು ಧೈರ್ಯ ಮೂಡಿಸಿದ್ದಾರೆ. ಸರಿಯಾಗಿ ಚಿಕಿತ್ಸೆ ಒದಗಿಸುವಂತೆ ತಾಲೂಕಾಸ್ಪತ್ರೆ ವೈದ್ಯರಿಗೆ ಸೂಚನೆ ನೀಡಿದ್ದಾರೆ. ಘಟನೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ.

24×7 ಕುಡಿಯುವ ನೀರೇ ಘಟನೆಗೆ ಮೂಲ?

ಇಂಡಿ ಪಟ್ಟಣದ ಸಮೀಪದಲ್ಲೆ ಈ ಸಾತಾಪುರ ಗ್ರಾಮವಿದೆ. ಪಟ್ಟಣದಿಂದ ಇಲ್ಲಿಗೆ 24×7 ಕುಡಿಯುವ ನೀರು ಸಪ್ಲೈ ಆಗುತ್ತೆ. ಕುಡಿಯುವ ನಳದ ನೀರಿನಲ್ಲಿ ಉಂಟಾದ ವ್ಯತ್ಯಾಸ, ಕಲುಷಿತ ನೀರು ಈ ಘಟನೆಗೆ ಕಾರಣ ಎನ್ನಲಾಗ್ತಿದೆ. ಈಗಾಗಲೇ ನೀರಿನ ಸ್ಯಾಂಪಲ್‌ ಪಡೆದುಕೊಂಡಿರುವ ತಜ್ಞರು ಪರೀಕ್ಷೆಗೆ ಕಳುಹಿಸಿದ್ದಾರೆ. ನಾಳೆ ನೀರಿನ ಪರೀಕ್ಷಾ ವರದಿಯು ಬರಲಿದೆ. ಬಳಿಕ ಘಟನೆಗೆ ಕಾರಣ ಏನು ಎನ್ನುವುದು ಪತ್ತೆಯಾಗಲಿದೆ ಎಂದು ಡಾ ರಾಜಶೇಖರ್‌ ಕೋಳೆಕರ್‌ ಮಾಹಿತಿ ನೀಡಿದ್ದಾರೆ.
 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ