ಉಡುಪಿ: ರಾ.ಹೆ.ಮೇಲ್ಸೇತುವೆಯಲ್ಲಿ ಪೇಜಾವರ ಶ್ರೀ ಹೆಸರಿನ ಫಲಕ!

By Kannadaprabha NewsFirst Published Jun 7, 2020, 7:52 AM IST
Highlights

ಬೆಂಗಳೂರಿನ ಯಲಹಂಕ ಮೇಲ್ಸೆತುವೆಗೆ ಮತ್ತು ಮಂಗಳೂರಿನ ಫ್ಲೈಓವರ್‌ಗಳಿಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ವಿವಾದಗಳೆದ್ದಿರುವ ಮಧ್ಯೆ, ಉಡುಪಿಯ ಕರಾವಳಿ ಬೈಪಾಸ್‌ ಮೇಲ್ಸೇತುವೆಗೆ ಯಾರೋ ಅನಾಮಿಕರು ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಿದ್ದಾರೆ.

ಉಡುಪಿ(ಜೂ.07): ಬೆಂಗಳೂರಿನ ಯಲಹಂಕ ಮೇಲ್ಸೆತುವೆಗೆ ಮತ್ತು ಮಂಗಳೂರಿನ ಫ್ಲೈಓವರ್‌ಗಳಿಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ವಿವಾದಗಳೆದ್ದಿರುವ ಮಧ್ಯೆ, ಉಡುಪಿಯ ಕರಾವಳಿ ಬೈಪಾಸ್‌ ಮೇಲ್ಸೇತುವೆಗೆ ಯಾರೋ ಅನಾಮಿಕರು ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಈ ಬೈಪಾಸ್‌ ಮೇಲ್ಸೇತುವೆಯ ಮೇಲೆ ಶನಿವಾರ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಮೇಲ್ಸೇತುವೆ ಎಂಬ ಬೋರ್ಡು ಪ್ರತ್ಯಕ್ಷವಾಗಿದೆ. ಆದರೆ, ಜಿಲ್ಲಾಡಳಿತವಾಗಲಿ, ಉಡುಪಿಯ ಜನಪ್ರತಿನಿಧಿಗಲಾಗಿ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಅಥವಾ ಈ ಮೇಲ್ಸೆತುವೆಗೆ ಪೇಜಾವರ ಶ್ರೀಗಳ ಹೆಸರಿಡುವ ಬಗ್ಗೆ ಸಾರ್ವಜನಿಕರಲ್ಲಿಯೂ ಅಭಿಪ್ರಾಯ ವ್ಯಕ್ತವಾಗಿಲ್ಲ.

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

ಮಂಗಳೂರಿನಲ್ಲಿ ಮೇಲ್ಸೇತುವೆ ಮೇಲೆ ಸಾವರ್ಕರ್‌, ರಾಣಿ ಅಬ್ಬಕ್ಕ, ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಅನಾಮಿಕರು ರಾತ್ರೋರಾತ್ರಿ ಅಳವಡಿಸಿ ಪ್ರಚಾರಕ್ಕೆ ಕಾರಣವಾಗಿದ್ದರು. ಬೆಂಗಳೂರಿನ ಯಲಹಂಕ ಸೇತುವೆಗೆ ಸಾವರ್ಕರ್‌ ಹೆಸರಿಡುವ ಬಗ್ಗೆ ಪರ ವಿರೋಧ ಅಭಿಯಾನವೇ ಆರಂಭವಾಗಿದೆ. ಅವುಗಳಿಂದ ಸ್ಫೂರ್ತಿ ಪಡೆದು ಉಡುಪಿಯಲ್ಲಿಯೂ ನಡೆದ ಈ ವಿದ್ಯಮಾನ ಜನರಲ್ಲಿ ಅಚ್ಚರಿ ಮೂಡಿಸಿದೆ.

click me!