ಸುಳ್ಯ: ಕೋಮಾ​ದ​ಲ್ಲಿದ್ದ ವೃದ್ಧೆ ದಿಢೀರ್‌ ಚೇತ​ರಿ​ಕೆ, ಅಂತ್ಯ​ಕ್ರಿ​ಯೆಗೆ ಸಿದ್ಧತೆ ನಡೆ​ಸಿದ್ದ ಕುಟುಂಬ​ಸ್ಥ​ರು..!

Kannadaprabha News   | Asianet News
Published : Aug 24, 2020, 09:37 AM IST
ಸುಳ್ಯ: ಕೋಮಾ​ದ​ಲ್ಲಿದ್ದ ವೃದ್ಧೆ ದಿಢೀರ್‌ ಚೇತ​ರಿ​ಕೆ, ಅಂತ್ಯ​ಕ್ರಿ​ಯೆಗೆ ಸಿದ್ಧತೆ ನಡೆ​ಸಿದ್ದ ಕುಟುಂಬ​ಸ್ಥ​ರು..!

ಸಾರಾಂಶ

ವೈದ್ಯರು ಇನ್ನೇನು ತೀರಿ​ಕೊಂಡು ಬಿಡು​ತ್ತಾ​ರೆಂದಿದ್ದ ಪ್ರಕ​ರ​ಣ| ಆಕ್ಸಿ​ಜನ್‌ ತೆಗೆ​ದರೆ ಕೆಲವೇ ಕ್ಷಣ​ದಲ್ಲಿ ತೀರಿ​ಕೊ​ಳ್ಳು​ತ್ತಾರೆ ಎಂದಿದ್ದ ವೈದ್ಯ​ರು| ವೈದ್ಯರ ಮಾತು ನಂಬಿ ಮನೆ​ಯಲ್ಲಿ ಅಂತ್ಯ​ಕ್ರಿ​ಯೆಗೆ ಸಿದ್ಧತೆ ನಡೆ​ಸಿದ್ದ ಕುಟುಂಬ​ಸ್ಥ​ರು| ಆಂಬ್ಯು​ಲೆ​ನ್ಸ್‌​ನಲ್ಲಿ ಮನೆಗೆ ಕರೆ​ದೊ​ಯ್ಯು​ವಾಗ ದಿಢೀರ್‌ ಚೇತ​ರಿ​ಸಿ​ಕೊಂಡ ವೃದ್ಧೆ| 

ಸುಳ್ಯ(ಆ.24): ಇನ್ನೇನು ಕೆಲವೇ ಕ್ಷಣ​ಗ​ಳಲ್ಲಿ ತೀರಿ​ಕೊಂಡು ಬಿಡು​ತ್ತಾರೆ ಎಂಬ ವೈದ್ಯರ ಸೂಚ​ನೆ​ಯಂತೆ ಕೋಮಾ​ದ​ಲ್ಲಿದ್ದ ವೃದ್ಧೆ​ಯೊ​ಬ್ಬ​ರನ್ನು ಕುಟುಂಬ​ಸ್ಥರು ಮನೆಗೆ ಕೊಂಡೊಯ್ಯುವ ವೇಳೆ ವೃದ್ಧೆ ದಾರಿ ಮಧ್ಯೆ ಚೇತರಿಸಿಕೊಂಡ ಘಟನೆ ಸುಳ್ಯ​ದಲ್ಲಿ ನಡೆ​ದಿ​ದೆ. 

ಮರ್ಕಂಜ ಗ್ರಾಮದ ಪಟ್ಟೆಮನೆ ಹೇಮಾವತಿ ರೈ (80) ಅವ​ರ​ನ್ನು ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೋಮಾಕ್ಕೆ ಜಾರಿದ್ದರು. ಇನ್ನು ಬದುಕುವುದು ಕಷ್ಟ, ಮನೆಗೆ ಕೊಂಡೊಯ್ಯಬಹುದು. ಆಕ್ಸಿಜನ್‌ ಪೈಪ್‌ ತೆಗೆದ ಸ್ವಲ್ಪ ಹೊತ್ತಿನಲ್ಲಿ ಜೀವ ಹೋದೀತು ಎಂಬ ವೈದ್ಯರ ಹೇ​ಳಿಕೆ ಹಿನ್ನೆ​ಲೆ​ಯಲ್ಲಿ ಆಂಬ್ಯು​ಲೆ​ನ್ಸ್‌​ನಲ್ಲಿ ಅವರನ್ನು ಕರೆದುಕೊಂಡು ಮನೆಯವರು ಊರಿ​ಗೆ ಹೊರ​ಟಿ​ದ್ದರು. ಇದೇ ವೇಳೆ ಅವರ ಊರು ಮರ್ಕಂಜದಲ್ಲಿ ಅಂತ್ಯ​ಕ್ರಿ​ಯೆಗೂ ಸಿದ್ಥತೆ ನಡೆ​ಸ​ಲಾ​ಗಿ​ತ್ತು.

ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಆದರೆ ಆಂಬ್ಯುಲೆನ್ಸ್‌ ಊರಿನ ಸಮೀಪ ತಲು​ಪು​ತ್ತಿ​ದ್ದಂತೆ ಇದ್ದ​ಕ್ಕಿ​ದ್ದಂತೆ ವೃದ್ಧೆ ಕೆಮ್ಮಿದರಲ್ಲದೆ ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಚೇತರಿಸಿಕೊಂಡರು. ಕೂಡಲೇ ಮನೆಯವರನ್ನು ಸಂಪರ್ಕಿಸಿ ಅಂತ್ಯಕ್ರಿಯೆಗೆ ನಡೆ​ಸಿದ್ದ ಸಿದ್ಧತೆಯನ್ನು ಸ್ಥಗಿತಗೊಳಿಸಿದರು. ಈಗ ವೃದ್ಧೆ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.
 

PREV
click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ