* ರಂಜಾನ್ ಹಬ್ಬ ಹಿನ್ನಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್
* ಎಲ್ಲರೂ ಲಾಕ್ ಡೌನ್ ರೂಲ್ಸ್ ಎಲ್ಲರೂ ಫಾಲೋ ಮಾಡಲೇಬೇಕು
* ಹಬ್ಬವೆಂದು ಮನೆಯಿಂದ ಹೊರ ಬರುವಂತಿಲ್ಲ, ಗುಂಪು ಸೇರುವಂತಿಲ್ಲ
* ಈಗಾಗಲೇ ಮುಸ್ಲಿಂ ಸಮುದಾಯಗಳ ಜೊತೆ ಮಾತುಕತೆ ನಡೆಸಿರುವ ಕಮಿಷನರ್ ಕಮಲ್ ಪಂತ್
ಬೆಂಗಳೂರು (ಮೇ 13) ರಂಜಾನ್ ಆಚರಣೆಗೂ ಮುನ್ನ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವೀಟ್ ಮಾಡಿದ್ದು ಅನೇಕ ವಿಚಾರಗಳನ್ನು ಸ್ಪಷ್ಟಮಾಡಿದ್ದಾರೆ.
ರಂಜಾನ್ ತಿಂಗಳ ಉಪವಾಸದ ಕೊನೆಯ ದಿನದ ಹಬ್ಬ ಈದ್ ಉಲ್ ಫಿತರ್ ಆಚರಣೆಗೆ ಈಗಾಗಲೇ ಸಿದ್ದತೆ ನಡೆಸಿದೆ. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗುವುದು ಸಂಪ್ರದಾಯವಾಗಿತ್ತು.
ಆದರೆ ಈ ಬಾರಿ ಕೋವಿಡ್ ಆತಂಕ ಎದುರಾಗಿದ್ದು, ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಈ ಹಿನ್ನಲೆ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸುವಂತೆ ಕೋರಲಾಗಿದೆ.
ಈ ಲಸಿಕೆ ಎಲ್ಲದಕ್ಕಿಂತ ಪರಿಣಾಮಕಾರಿ ಎಂದ ಸುಧಾಕರ್
ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿದ್ದು, ಮನೆಯಲ್ಲಿಯೇ ನಮಾಜ್ ಮಾಡಬಹುದು. ನಿಯಮ ಜಾರಿಯಲ್ಲಿರುವುದರಿಂದ ಯಾರು ಮನೆಯಿಂದ ಹೊರ ಬರುವಂತಿಲ್ಲ. ಗುಂಪು ಸೇರುವಂತಿಲ್ಲ ಎಂದು ಪಂತ್ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯಗಳ ಜೊತೆ ಮಾತುಕತೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು, ಗುಂಪು ಸೇರುವಂತಿಲ್ಲ. ಅಗತ್ಯ ಮುನ್ನೆಚ್ಚರಿಕೆವಹಿಸಬೇಕು. ಕೊರೋನಾ ನಿಯಮಗಳ ಪಾಲನೆ ಅಗತ್ಯ ಎಂದು ತಿಳಿಸಿದ್ದಾರೆ.
KIND ATTN📢:
It is to clarify that in view of being celebrated TOMORROW (May 14) as decided by the concerned committee, no prayers, gatherings, or celebrations of any kind can be held in mosques/eidgahs/grounds. (1/2)