ಕನಕಪುರಕ್ಕೆ ತೆರಳಿ ವೈಯಕ್ತಿಕ ದೇಣಿಗೆ ನೀಡಿದ ನಿಖಿಲ್

By Kannadaprabha NewsFirst Published Mar 16, 2021, 11:53 AM IST
Highlights

ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕನಕಪುರಕ್ಕೆ ಭೇಟಿ ನೀಡಿ ವೈಕ್ತಿಕ ಹಣವನ್ನು ದೇಣಿಗೆ ನೀಡಿ ಬಂದಿದ್ದಾರೆ. 

ಕನ​ಕ​ಪುರ (ಮಾ.16): ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿಯ ಮರ​ಳ​ವಾಡಿ ಹೋಬ​ಳಿಯ ಹಲವು ದೇವ​ಸ್ಥಾ​ನ​ಗ​ಳಿಗೆ ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾಮಿ ಸೋಮ​ವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿ​ಸಿ​ದರು. 

ಬಿಳಿ​ಗ​ನ​ಕುಪ್ಪೆ ಗ್ರಾಮಕ್ಕೆ ಆಗ​ಮಿ​ಸಿದ ನಿಖಿಲ್‌ ಕುಮಾ​ರ​ಸ್ವಾಮಿ, ಗ್ರಾಮ ದೇವತೆ ಶ್ರೀಮಾರಮ್ಮ ದೇಗು​ಲ​ದ​ಲ್ಲಿ ಪೂಜೆ ಸಲ್ಲಿ​ಸಿ​ ದೇವ​ಸ್ಥಾ​ನದ ಕಟ್ಟಡ ನಿರ್ಮಾಣ ಕಾಮ​ಗಾ​ರಿ​ಗಾಗಿ ವೈಯ​ಕ್ತಿ​ಕ​ವಾಗಿ  50 ಸಾವಿರ ದೇಣಿಗೆ ನೀಡಿ​ದ​ರು.

ಯಲ್ಲಾಪುರದ ಅರಣ್ಯ ಸರಹದ್ದಿನಲ್ಲಿ ರೈಡರ್ 'ನಿಖಿಲ್'!

 ಉಳಿದಂತೆ ತಟ್ಟೆ​ಕೆರೆ ಗ್ರಾಮದ ಶ್ರೀಬಲ​ಮುರಿ ಗಣ​ಪತಿ ದೇವ​ಸ್ಥಾನ, ಕೋಳ​ಲಾ​ಗೊಂದಿ ಗ್ರಾಮದ ಶ್ರೀ ಮಾರಮ್ಮ ದೇವಿ ದೇವ​ಸ್ಥಾನ, ಜುಟ್ಟಿಗೌಡನದೊಡ್ಡಿ ಗ್ರಾಮದ ಶ್ರೀಮಾರಮ್ಮ ದೇವಸ್ಥಾನ, ಅರೇಕದಕಲ್ಲು ಗ್ರಾಮದ ಶ್ರೀಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

click me!