World Wildlife Day : ಆನೆ ಕಾರಿಡಾರ್‌ ಉಳಿಸಿ.... ನಮ್ಮ ಬೆಂಗಳೂರು ಫೌಂಡೇಶನ್ ಮನವಿ

By Contributor AsianetFirst Published Mar 3, 2022, 6:24 PM IST
Highlights

* ಬನ್ನೇರುಘಟ್ಟ  ಜೈವಿಕ ಉದ್ಯಾನ ಉಳಿವಿಗೆ ನಮ್ಮ ಬೆಂಗಳೂರು ಫೌಂಡೇಶನ್ ಕಟಿಬದ್ಧ
* ಆನೆ ಕಾರಿಡಾರ್‌ಗೆ ಸರಿಯಾದ ಚಿತ್ರಣ ನೀಡಲು ಆಗ್ರಹ
* ವನ್ಯಜೀವಿಗಳ ಹಕ್ಕು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ

ಬೆಂಗಳೂರು(ಮಾ. 03) ವಿಶ್ವ ವನ್ಯಜೀವಿ ದಿನ (World Wildlife Day) ಮಾನವ ಕುಲಕ್ಕೆ ಬಹಳ ಪ್ರಾಮುಖ್ಯವಾದುದ್ದು.  ವನ್ಯಜೀವಿಗಳ ಹಕ್ಕು ಮತ್ತು ಸಂರಕ್ಷಣೆ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಮ್ಮ  ಬೆಂಗಳೂರು ಫೌಂಡೇಶನ್  (Namma Bengaluru Foundation) ಬನ್ನೇರುಘಟ್ಟ ಜೈವಿಕ ಆವಾಸ ಸ್ಥಾನದ ಸಂರಕ್ಷಣೆಯಲ್ಲಿಯೂ ಹೋರಾಟ ಮಾಡಿಕೊಂಡು ಬಂದಿದೆ.

ನಮ್ಮ ಬೆಂಗಳೂರು ಫೌಂಡೇಶನ್ ಹಾಗೂ ವೃಕ್ಷ ಫೌಂಡೇಶನ್  (Vruksha Foundation) ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ. ಜೆ.ಮಂಜುನಾಥ್  ಅವರಿಗೆ  ವಿಶೇಷ ಮನವಿ ಒಂದನ್ನು ಸಲ್ಲಿಕೆ ಮಾಡಿದೆ.  ಎಲಿಫೆಂಟ್ ಕಾರಿಡಾರ್ 1000 ಎಕರೆ ಸರ್ವೆ ಕಾರ್ಯವನ್ನು ತ್ವರಿತಗೊಳಿಸಬೇಕು ಜತೆಗೆ  232 ಎಕರೆ ಜಮೀನಿನ ಮಾಲೀಕತ್ವವನ್ನು  ಅರಣ್ಯ ಇಲಾಖೆ ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯ ಮಾಡಿದೆ.

ವಿಶ್ವ ವನ್ಯಜೀವಿ ದಿನದ ಸಂದರ್ಭದಲ್ಲಿ, ಬನ್ನೇರುಘಟ್ಟ ಉದ್ಯಾನವನವನ್ನು ಸಂರಕ್ಷಣೆ  ಬಗ್ಗೆ ತ್ವರಿತ ಕ್ರಮ ತೆಗೆದುಕೊಳ್ಳುವಂತೆ ಗಮನಹರಿಸಲು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ.   ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಗಮದಲ್ಲಿದೆ ಮತ್ತು ಆದ್ದರಿಂದ ಈ ಭೂದೃಶ್ಯಕ್ಕೆ ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿಗಳೆರಡನ್ನೂ ಹೊಂದಿರುವ ಪರಿಸರ ಸೇತುವೆಯಾಗಿದೆ. ಎರಡು ಘಟ್ಟಗಳ ನಡುವೆ ವಲಸೆ ಬರುವ ಆನೆಗಳಿಗೆ ರಾಷ್ಟ್ರೀಯ ಉದ್ಯಾನವನವು ಪ್ರಮುಖ ಕಾರಿಡಾರ್ ಆಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಾನವ-ಪ್ರಾಣಿ ಸಂಘರ್ಷಗಳನ್ನು ನಾವು ಹೆಚ್ಚಾಗಿ ನೋಡುತ್ತಿದ್ದೇವೆ. ಈ ಪ್ರಾಣಿಗಳ ಪ್ರಸರಣ ಮತ್ತು ಕ್ಷಿಪ್ರ ನಗರೀಕರಣವು ಇತ್ತೀಚಿನ ವರ್ಷಗಳಲ್ಲಿ ಅವುಗಳನ್ನು ಮನುಷ್ಯರೊಂದಿಗೆ ಸಂಘರ್ಷಕ್ಕೆ ತಂದಿದೆ. ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸುವ ಈ ಕ್ರಮವು ಈ ಪ್ರದೇಶದ ಪರಿಸರ ಸಮತೋಲನವನ್ನು ಹಾಳುಮಾಡುತ್ತದೆ ಮಾತ್ರವಲ್ಲದೆ ಮನುಷ್ಯರು ಮತ್ತು ಈ ಪ್ರಾಣಿಗಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ.  ಹಾಗಾಗಿ ಆನೆ ಕಾರಿಡಾರ್ ವಿಚಾರದಲ್ಲಿ ಸ್ಪಷ್ಟ  ನಿರ್ಧಾರ ತೆಗೆದುಕೊಳ್ಳಬೇಕು ಎಂದು  ಒತ್ತಾಯ ಮಾಡಲಾಗಿದೆ.

NBF ನಿಂದ ವೃಕ್ಷ ಅಭಿಯಾನ: ಬೆಂಗಳೂರು ಸುತ್ತಮುತ್ತ 75 ಸಾವಿರ ಗಿಡಗಳನ್ನು ನೆಡುವ ಗುರಿ

ಮನವಿ ಸ್ವೀಕರಿದ ಜಿಲ್ಲಾಧಿಕಾರಿ ಮಂಜುನಾಥ್ ಮಾತನಾಡಿ,  ಈ ಬಗ್ಗೆ ಸಮೀಕ್ಷೆ ನಡೆಯುತ್ತಿದೆ, ಮತ್ತು ವರದಿಯನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು.  ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯೊಂದಿಗೆ  ನಿರಂತರ ಸಂಪರ್ಕದಲ್ಲಿದ್ದು ಎಲ್ಲ ಮಾಹಿತಿ ತರಿಸಿಕೊಂಡಿದ್ದೇನೆ.  ಅತಿಕ್ರಮಣದಾರರನ್ನು ತೆರವುಗೊಳಿಸಿ, ಈ ಭಾಗದ ರೈತರಿಗೆ ಪುನರ್ವಸತಿ ಕಲ್ಪಿಸಿ, ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಬೆಂಗಳೂರು ಫೌಂಡೇಶನ್‌ನ  ವಿನೋದ್ ಜಾಕೋಬ್ ಮಾತನಾಡಿ, ರಾಷ್ಟ್ರೀಯ ಉದ್ಯಾನವನವನ್ನು ಹೊಂದಲು  ಹೊಂದಿರುವುದು ಬೆಂಗಳೂರಿಗೆ  ಹೆಮ್ಮೆ.  ಇದನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು ಮತ್ತು ಸಂರಕ್ಷಿಸಬೇಕು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ಮತ್ತು ಪರಿಸರ ವಿಜ್ಞಾನಕ್ಕೆ ಇನ್ನು ಮುಂದೆ ಯಾವುದೇ ಹಾನಿಯಾಗದಂತೆ ತಡೆಯಲು ಸರ್ಕಾರ ಪರಿಹಾರ ಸೂತ್ರ ಹುಡುಕಬೇಕು. . ಈ ವರ್ಷದ ಯುಎನ್ ವನ್ಯಜೀವಿ ಸಂಘಟನೆಯ ಥೀಮ್‌  ನಂತೆ ಉದ್ಯಾನವನವನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪನೆ ಮಾಡಬೇಕು ಎಂದು ಹೇಳಿದರು.

ಪ್ರಾಜೆಕ್ಟ್ ವೃಕ್ಷ ಫೌಂಡೇಶನ್ ಸಂಸ್ಥಾಪಕ ವಿಜಯ್ ನಿಶಾಂತ್  ಮಾತನಾಡಿ, ಬನ್ನೇರುಘಟ್ಟದಲ್ಲಿರುವ ನಮ್ಮ ರಾಷ್ಟ್ರೀಯ ಉದ್ಯಾನವನ್ನು ನಾವು ಸಂರಕ್ಷಿಸಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಸುದ್ದಿ ಇನ್ನೊಂದಿಲ್ಲ  ಈ ರಾಷ್ಟ್ರೀಯ ಉದ್ಯಾನವನವು  ಬೆಂಗಳೂರನ್ನು ತಾಗಿಕೊಂಡು ಇದೆ. ನಮ್ಮ ಮುಂದಿನ ಪೀಳಿಗೆಗೆ ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ಸಂರಕ್ಷಿಸುವುದು ನಮ್ಮ ಜವಾಬ್ದಾರಿ. ಆನೆ ಕಾರಿಡಾರ್ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಉಳಿಸಲು ಈ ಪ್ರಯತ್ನವನ್ನು ಮಾಡುತ್ತಿರುವ ಎಲ್ಲಾ ಅಧಿಕಾರಿಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.

ನಮ್ಮ ಬೆಂಗಳೂರು ಫೌಂಡೇಶನ್: ಎನ್‌ಜಿಒ ನಮ್ಮ ಬೆಂಗಳೂರು ಫೌಂಡೇಶನ್ ಬೆಂಗಳೂರು ನಾಗರಿಕರ ಹಕ್ಕು ಸಂರಕ್ಷಣೆ ಗುರಿಯೊಂದಿಗೆ ಕೆಲಸ ಮಾಡಿಕೊಂಡು ಬಂದಿದೆ.  ಸಾರ್ವಜನಿಕರ ಪಾಲುದಾರಿಕೆಯೊಂದಿಗೆ ಸಾರ್ವಜನಿಕ ಆಸ್ತಿ ಸಂರಕ್ಷಣೆ ಗುರಿಯೊಂದಿಗೆ  ಕೆಲಸ ಮಾಡುತ್ತಿದೆ. 

 

click me!