ಗೋಮಾಂಸ ಸಾಗಾಟ ಶಂಕೆ: ವಾಹನಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

Kannadaprabha News   | Asianet News
Published : Jun 07, 2020, 10:03 AM ISTUpdated : Jun 07, 2020, 10:14 AM IST
ಗೋಮಾಂಸ ಸಾಗಾಟ ಶಂಕೆ: ವಾಹನಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು

ಸಾರಾಂಶ

ಬೆಳಗಾವಿಯಿಂದ ಗೋವಾಕ್ಕೆ ಅನಧಿಕೃತವಾಗಿ ಗೋಮಾಂಸ ಸಾಗಾಟ ಶಂಕೆ| ವಾಹನ ಕಾಯುತ್ತ ನಿಂತಿದ್ದ ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು| ವಾಹನ ತಡೆದು ಬೆಂಕಿ ಹಚ್ಚಿದ ದುಷ್ಕರ್ಮಿಗಳು|

ಬೆಳಗಾವಿ(ಜೂ.07):  ನಗರದಿಂದ ಗೋವಾ ರಾಜ್ಯಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿ ವಾಹನವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶನಿವಾರ ಬೆಳಗಿನ ಜಾವ ಬೆಳಗಾವಿಯ ಕರ್ಲೆ- ಬೆಳವಟ್ಟಿ ರಸ್ತೆಯ ಮೇಲೆ ಸಂಭವಿಸಿದೆ. 

ಬೆಳಗಾವಿಯಿಂದ ಗೋವಾಕ್ಕೆ ಅನಧಿಕೃತವಾಗಿ ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಾಹನ ಕಾಯುತ್ತ ನಿಂತಿದ್ದರು. ವಾಹನವನ್ನು ತಡೆದು ಬೆಂಕಿ ಹಚ್ಚಿದ್ದಾರೆ. ವಾಹನದಲ್ಲಿದ್ದವರು ಓಡಿ ಹೋಗಿದ್ದಾರೆ. 

ಬೆಳಗಾವಿ: 'ಕೊರೋನಾ ಕಾಟದ ಮಧ್ಯೆಯೇ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ಧರಾಗಿ'

ವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆಯಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಈ ವಾಹನ ನಿತ್ಯ ಗೋವಾಕ್ಕೆ ತೆರಳುತಿತ್ತು ಎನ್ನಲಾಗಿದೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV
click me!

Recommended Stories

ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ
ಮೇ ಅಂತ್ಯಕ್ಕೆ ಎಲ್ಲ 33 ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣ: ಸಚಿವ ಎನ್.ಎಸ್.ಬೋಸರಾಜು