ಕೊರೋನಾ ನಿಯಂತ್ರಣಕ್ಕೆ 208 ಕೋಟಿ ಬಿಡುಗಡೆ: ಸಚಿವ ಅಶೋಕ್‌

Published : May 08, 2020, 10:08 AM ISTUpdated : May 18, 2020, 06:05 PM IST
ಕೊರೋನಾ ನಿಯಂತ್ರಣಕ್ಕೆ 208 ಕೋಟಿ ಬಿಡುಗಡೆ: ಸಚಿವ ಅಶೋಕ್‌

ಸಾರಾಂಶ

ಕೋವಿಡ್‌-19 ನಿಯಂತ್ರಣಕ್ಕಾಗಿ 208.01 ಕೋಟಿ ರು. ವಿಪತ್ತು ನಿರ್ವಹಣಾ ಕೇಂದ್ರದಿಂದ ಬಿಡುಗಡೆ| ಬಿಡುಗಡೆ ಮಾಡಿದ ಹಣದ ಪೈಕಿ ಆರೋಗ್ಯ ಇಲಾಖೆಗೆ 20 ಕೋಟಿ ರು., ಬೆಂಗಳೂರು ನಗರ ಜಿಲ್ಲೆ 25 ಕೋಟಿ ರು., ಪೊಲೀಸರಿಗೆ ರಕ್ಷಣಾ ಕವಚ ಖರೀದಿಗೆ 5 ಕೋಟಿ ರು. ಬಿಡುಗಡೆ|

ಬೆಂಗಳೂರು(ಮೇ.08): ಕೋವಿಡ್‌-19 ನಿಯಂತ್ರಣಕ್ಕಾಗಿ 208.01 ಕೋಟಿ ರು.ಗಳನ್ನು ವಿಪತ್ತು ನಿರ್ವಹಣಾ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ. 

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡುಗಡೆ ಮಾಡಿದ ಹಣದ ಪೈಕಿ ಆರೋಗ್ಯ ಇಲಾಖೆಗೆ 20 ಕೋಟಿ ರು., ಬೆಂಗಳೂರು ನಗರ ಜಿಲ್ಲೆ 25 ಕೋಟಿ ರು., ಪೊಲೀಸರಿಗೆ ರಕ್ಷಣಾ ಕವಚ ಖರೀದಿಗೆ 5 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. 

ತರಕಾರಿ, ಹಣ್ಣು ಬೆಳೆಗಾರರಿಗೂ ಶೀಘ್ರವೇ ಪ್ಯಾಕೇಜ್‌: ಸಚಿವ ಪಾಟೀಲ

ಜೈಲು ಸಿಬ್ಬಂದಿಗೆ ರಕ್ಷಣಾ ಕವಚ ಖರೀದಿಸಲು 2 ಕೋಟಿ ರು. ನೀಡಲಾಗಿದೆ. ಚಾಮರಾಜನಗರದಲ್ಲಿ ಪ್ರಯೋಗಾಲಯಕ್ಕಾಗಿ 1.09 ಕೋಟಿ ರು., ರಾಮನಗರದಲ್ಲಿ ಪರೀಕ್ಷಾ ಪ್ರಯೋಗಾಲಯಕ್ಕಾಗಿ 1.1 ಕೋಟಿ ರು. ನೀಡಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಒಟ್ಟು 150 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

PREV
click me!

Recommended Stories

Zameer Ahmed: ಖಾತೆ ಹಂಚಿಕೆ ಬೆನ್ನಲ್ಲೇ ಬಿಗ್ ಟ್ವಿಸ್ಟ್! ಉಸ್ತುವಾರಿ ಬೇಡ, ಧ್ವಜಾರೋಹಣಕ್ಕೂ ಹೋಗಲ್ಲ ಎಂದ ಜಮೀರ್; ಕೊಟ್ಟ ಕಾರಣವೇನು?
ಅಕ್ಟೋಬರ್‌ನಿಂದ ಬೆಂಗಳೂರಿನ ಔಟರ್‌ ರಿಂಗ್‌ ರೋಡ್‌ ವೈಟ್‌ ಟ್ಯಾಪಿಂಗ್‌, ಟೆಕ್ಕಿಗಳಿಗೆ WFH ನೀಡುವಂತೆ ಸರ್ಕಾರ ಸಲಹೆ