
ಮಂಡ್ಯ (ಆ.31): ರಾಜ್ಯದಲ್ಲಿ ಕಾವೇರಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ಉಲ್ಬಣಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಇಷ್ಟು ದಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಹರಿಯುತ್ತಿದ್ದ ಕಾವೇರಿ ನೀರು, ಇದೀಗ ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ (ಕೆಆರ್ಎಸ್) ಅಣೆಕಟ್ಟೆಯಿಂದಲೂ ತಮಿಳುನಾಡಿಗೆ ಹರಿಯಲು ಆರಂಭಿಸಿದೆ. ಇದು ಸ್ಥಳೀಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಆರ್ಎಸ್ ಜಲಾಶಯಕ್ಕೆ ಬರುವ ನೀರಿಗಿಂತ ಹೊರಹೋಗುವ ನೀರಿನ ಪ್ರಮಾಣವೇ ಹೆಚ್ಚಾಗಿದೆ. ಜಲಾಶಯದ ಇಂದಿನ ಒಳಹರಿವು ಕೇವಲ 5,426 ಕ್ಯೂಸೆಕ್ ಇದ್ದರೆ, ತಮಿಳುನಾಡಿಗೆ ಹರಿಸುತ್ತಿರುವ ಹೊರಹರಿವು ಬರೋಬ್ಬರಿ 7,170 ಕ್ಯೂಸೆಕ್ ತಲುಪಿದೆ. ದಿನದಿಂದ ದಿನಕ್ಕೆ ಕಾವೇರಿ ನಡಿಗೆ ನೀರು ಹರಿಸುವ ಪ್ರಮಾಣ ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಮಂಡ್ಯ ಭಾಗದ ನಮ್ಮದೇ ರೈತರ ಕೃಷಿ ಬೆಳಗಳಿಗೆ ನೀರು ಕೊಡುವುದಿಲ್ಲ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ, ಮತ್ತೊಂದೆಡೆ ತಮಿಳುನಾಡಿನ ಕೃಷಿಗೆ ಮಾತ್ರ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. 'ಒಂದೆಡೆ ನಮ್ಮ ರೈತರಿಗೆ ನೀರನ್ನೇ ಬಿಡುವುದಿಲ್ಲ ಎಂದು ಹೇಳುವ ಸರ್ಕಾರ, ಮತ್ತೊಂದೆಡೆ ಕದ್ದುಮುಚ್ಚಿ ಹೆಚ್ಚುವರಿಯಾಗಿ ನೀರು ಹರಿಸುತ್ತಿರುವುದು ರೈತದ್ರೋಹಿ ನೀತಿಯಾಗಿದೆ' ಎಂದು ಕೃಷಿಕರು ಆಕ್ರೋಶ ಹೊರಹಾಕಿದ್ದಾರೆ.
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 110.04 ಅಡಿ (110.20 ಅಡಿ)
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ನೀರಿನ ಸಂಗ್ರಹ: 31.381 ಟಿಎಂಸಿ
ಒಳಹರಿವು (Inflow): 5,426 ಕ್ಯೂಸೆಕ್
ಹೊರಹರಿವು (Outflow): 7,170 ಕ್ಯೂಸೆಕ್
ಗರಿಷ್ಠ ನೀರಿನ ಮಟ್ಟ (FRL): 2284 ಅಡಿ
ಪ್ರಸ್ತುತ ನೀರಿನ ಮಟ್ಟ (PRL): 2270.65 ಅಡಿ
ಇಂದಿನ ನೀರಿನ ಸಂಗ್ರಹ: 12 / 19.52 ಟಿಎಂಸಿ
ಒಳಹರಿವು (Inflow): 4,480 ಕ್ಯೂಸೆಕ್
ಹೊರಹರಿವು (Outflow): 8,260 ಕ್ಯೂಸೆಕ್