ಮಂಗಳೂರು: ದಿನಸಿ ಸಾಲ ಕೇಳಿದ್ದಕ್ಕೆ ಅಂಗಡಿಗೆ ಬೆಂಕಿ ಹಚ್ಚಿದ ವ್ಯಕ್ತಿ!

Published : Jul 11, 2025, 11:55 AM IST
Money Horoscope

ಸಾರಾಂಶ

ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ದಿನಸಿ ಸಾಲ ವಾಪಸ್ ಕೇಳಿದ್ದಕ್ಕೆ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ. ಸಾಲಗಾರ ಉಮೇಶ್ ಬಂಗೇರಾನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಬೆಂಕಿ ಹಚ್ಚಿದ ದೃಶ್ಯಗಳು ದಾಖಲಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ದಿನಸಿ ಸಾಲ ವಾಪಸ್ ಕೇಳಿದ್ದ ಕಾರಣ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿಯಾಗಿರುವ ಉಮೇಶ್ ಬಂಗೇರಾ ಅವರನ್ನು ಬಂಧಿಸಿದ್ದಾರೆ. ಮಾಹಿತಿಯಂತೆ, ಉಮೇಶ್ ಬಂಗೇರಾ ಹಿಂದಿನ ದಿನಗಳಲ್ಲಿ ಹೋಟೆಲ್ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಸದಕತುಲ್ಲಾ ಎಂಬ ವ್ಯಕ್ತಿಯ ದಿನಸಿ ಅಂಗಡಿಯಿಂದ ಸುಮಾರು 38 ಸಾವಿರ ರೂಪಾಯಿ ಮೌಲ್ಯದ ದಿನಸಿಗಳನ್ನು ಸಾಲವಾಗಿ ಪಡೆದಿದ್ದರು.

ಸದಕತುಲ್ಲಾ ತಮ್ಮ ಹಳೆಯ ಬಾಕಿ ತೀರಿಸಲು ಉಮೇಶನಿಗೆ ಹಲವು ಬಾರಿ ಕರೆ ಮಾಡಿ ಒತ್ತಡ ತಳೆದಿದ್ದನು. ಇದರಿಂದ ಕೋಪಗೊಂಡ ಉಮೇಶ್, ಅಂಗಡಿಯ ಮುಂಭಾಗದಲ್ಲಿದ್ದ ಫ್ಲೆಕ್ಸ್ ಶೀಟ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಯಿಂದ ಅಂಗಡಿಗೆ ಸುಮಾರು 3 ಸಾವಿರ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ. ಬೆಂಕಿ ಹಚ್ಚಿದ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ದಿನಸಿ ಸಾಲ ವಾಪಸ್ ಕೇಳಿದ್ದ ಕಾರಣ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸರು ಆರೋಪಿಯಾಗಿರುವ ಉಮೇಶ್ ಬಂಗೇರಾ ಅವರನ್ನು ಬಂಧಿಸಿದ್ದಾರೆ. ಮಾಹಿತಿಯಂತೆ, ಉಮೇಶ್ ಬಂಗೇರಾ ಹಿಂದಿನ ದಿನಗಳಲ್ಲಿ ಹೋಟೆಲ್ ನಿರ್ವಹಿಸುತ್ತಿದ್ದರು. ಆ ಸಮಯದಲ್ಲಿ ಸದಕತುಲ್ಲಾ ಎಂಬ ವ್ಯಕ್ತಿಯ ದಿನಸಿ ಅಂಗಡಿಯಿಂದ ಸುಮಾರು 38 ಸಾವಿರ ರೂಪಾಯಿ ಮೌಲ್ಯದ ದಿನಸಿಗಳನ್ನು ಸಾಲವಾಗಿ ಪಡೆದಿದ್ದರು.

ಸದಕತುಲ್ಲಾ ತಮ್ಮ ಹಳೆಯ ಬಾಕಿ ತೀರಿಸಲು ಉಮೇಶನಿಗೆ ಹಲವು ಬಾರಿ ಕರೆ ಮಾಡಿ ಒತ್ತಡ ತಳೆದಿದ್ದನು. ಇದರಿಂದ ಕೋಪಗೊಂಡ ಉಮೇಶ್, ಅಂಗಡಿಯ ಮುಂಭಾಗದಲ್ಲಿದ್ದ ಫ್ಲೆಕ್ಸ್ ಶೀಟ್‌ಗೆ ಬೆಂಕಿ ಹಚ್ಚಿದ್ದಾರೆ. ಈ ಬೆಂಕಿಯಿಂದ ಅಂಗಡಿಗೆ ಸುಮಾರು 3 ಸಾವಿರ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ. ಬೆಂಕಿ ಹಚ್ಚಿದ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ