ಕುಡಿದ ಮತ್ತಲ್ಲಿ ಭಾವನಿಗೆ ಗುಂಡಿಟ್ಟು ಕೊಂದ ಭಾಮೈದ

Kannadaprabha News   | Asianet News
Published : Jul 05, 2021, 07:22 AM IST
ಕುಡಿದ ಮತ್ತಲ್ಲಿ ಭಾವನಿಗೆ ಗುಂಡಿಟ್ಟು ಕೊಂದ ಭಾಮೈದ

ಸಾರಾಂಶ

ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಬಾವನನ್ನು ಬಾಮೈದ ಗುಂಡಿಕ್ಕಿ ಕೊಲೆ ಮಾಡಿದ   ಕೋಲಾರ ಜಿಲ್ಲೆ ಮಾಲೂರು ತಾಲೂಕು ಗೊಲ್ಲಹಳ್ಳಿ ಗ್ರಾಮದಲ್ಲಿ ಘಟನೆ

ಮಾಲೂರು (ಜು.05): ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಬಾವನನ್ನು ಬಾಮೈದ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 

ತಾಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಗ್ರಾಪಂನ ಗೊಲ್ಲಹಳ್ಳಿಯ ಮುನಿಯಪ್ಪ (35 ) ಗುಂಡೇಟಿಗೆ ಬಲಿಯಾದವರು. ಆರೋಪಿ ವೆಂಕಟೇಶ್‌ ಪರಾರಿಯಾಗಿದ್ದಾನೆ. ಮುನಿಯಪ್ಪ ಹಾಗು ವೆಂಕಟೇಶ್‌ ಅವರು ಭಾವ ಭಾಮೈದನರಾಗಿದ್ದು ಪ್ರತಿನಿತ್ಯ ಕುಡಿದು ಕ್ಷುಲಕ ಕಾರಣಕ್ಕೆ ಜಗಳವಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮಗನ ವಯಸ್ಸಿನವನ ಜೊತೆ ಅಕ್ರಮ ಸಂಬಂಧ : ಗಂಡನನ್ನೇ ಕೊಂದಳು .

 ಶನಿವಾರ ರಾತ್ರಿಯೂ ಕುಡಿದ ಅಮಲಿನಲ್ಲಿ ಮತ್ತೇ ಜಗಳವಾಡಿದ್ದು ವೆಂಕಟೇಶ್‌ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಶಿವಮೊಗ್ಗ ಪೌರ ಕಾರ್ಮಿಕರು, ವಿದ್ಯಾರ್ಥಿಗಳಿಗೆ ವಿಮಾನದಲ್ಲಿ ಟೂರ್ ಮಾಡಿಸಿದ ಸಚಿವ ಮಧು ಬಂಗಾರಪ್ಪ!
ಲಂಚದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕಬಳ್ಳಾಪುರ ಪಿಎಸ್‌ಐ; ರೌಡಿಶೀಟರ್ ಹೆಸರು ಕೈಬಿಡಲು ₹70 ಸಾವಿರ ಬೇಡಿಕೆ!