ಎರಡು ದಿನಗಳ ಕಾಲಮದ್ಯ ಮಾರಾಟ ಬಂದ್ ಮಾಡಿ ಆದೇಶ ನೀಡಲಾಗಿದೆ.ಗಣೇಶ ಉತ್ಸವ ಹಿನ್ನೆಲೆಯಲ್ಲಿ ಅಹಿತರ ಘಟನೆಗಳು ನಡೆಯದಿರಲು ಈ ಕ್ರಮ ಕೈಗೊಳ್ಳಲಾಗಿದೆ.
ಹೊಳಲ್ಕೆರೆ [ಸೆ.12] : ಸೆಪ್ಟಂಬರ್ 14ರಂದು ಶನಿವಾರ ಹೊಳಲ್ಕೆರೆಯ ವಿಶ್ವ ಮಹಾಗಣಪತಿ ವಿಸರ್ಜನೆ ಮೆರವಣಿಗೆ ನಡೆಯಲಿದ್ದು, 25 ಸಾವಿರ ಭಕ್ತರು ಮತ್ತು ಸ್ವಯಂ ಸೇವಕರು, ಮುಖಂಡರು ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೊಳಲ್ಕೆರೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೆ.14ರಂದು ಬೆಳಗ್ಗೆ 6ಗಂಟೆಯಿಂದ ಸೆ.15ರಂದು ಬೆಳಗ್ಗೆ 6ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಸಿಪಿಐ ಕೆ.ಎನ್ರವೀಶ್ ತಿಳಿಸಿದ್ದಾರೆ.