ಚಾಮರಾಜನಗರ: ಹಸಿವಿನಿಂದ ನರಳಿ ಪ್ರಾಣಬಿಟ್ಟ ಚಿರತೆ..!

By Girish GoudarFirst Published Sep 24, 2024, 10:06 AM IST
Highlights

ಚಾಮರಾಜನಗರ ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯಿಂದ 16 ಕಿಲೋಮೀಟರ್ ದೂರದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. 

ಚಾಮರಾಜನಗರ(ಸೆ.24):  ಜಮೀನೊಂದರಲ್ಲಿ ಚಿರತೆ ಶವ ಪತ್ತೆಯಾದ ಘಟನೆ ಚಾಮರಾಜನಗರ ತಾಲೂಕಿನ ವಡ್ಡರಹಳ್ಳಿಯ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಸುಮಾರು ಒಂದು ವರ್ಷ ವಯಸ್ಸಿನ ಹೆಣ್ಣು ಚಿರತೆ ಇದಾಗಿದೆ ಎಂದು ಅಂದಾಜಿಸಲಾಗಿದೆ. 

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಗಡಿಯಿಂದ 16 ಕಿಲೋಮೀಟರ್ ದೂರದಲ್ಲಿ ಚಿರತೆಯ ಕಳೇಬರ ಪತ್ತೆಯಾಗಿದೆ. 

Latest Videos

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಡಿಮಾರ್ಟ್‌ ಬಳಿ ಮತ್ತೆ ಚಿರತೆ ಓಡಾಟ ಪತ್ತೆ, ಆತಂಕದಲ್ಲಿ ಜನತೆ..!

ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆದಿದ್ದು ಹಸಿವಿನಿಂದ ಮೃತಪಟ್ಟಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಮಾಹಿತಿ ನೀಡಿದ್ದಾರೆ. 

click me!