ಕುವೆಂಪು ವಿವಿ: 6 ಸಿಂಡಿಕೇಟ್ ಸದಸ್ಯರಿಗೆ ಗೇಟ್’ಪಾಸ್

Published : Jul 26, 2018, 01:39 PM IST
ಕುವೆಂಪು ವಿವಿ: 6 ಸಿಂಡಿಕೇಟ್ ಸದಸ್ಯರಿಗೆ ಗೇಟ್’ಪಾಸ್

ಸಾರಾಂಶ

ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ವಿವಿಗಳಿಗೆ ಅಧಿಸೂಚನೆಯೊಂದನ್ನು ನೀಡಿ, ಹಿಂದಿನ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ಸದಸ್ಯರನ್ನು ಸದಸ್ಯತ್ವದಿಂದ ಮುಕ್ತಗೊಳಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕುವೆಂಪು ವಿವಿ ಸಿಂಡಿಕೇಟ್’ಗೆ ಹಿಂದಿನ ಸರ್ಕಾರ ನೇಮಕ ಮಾಡಿದ್ದ ಆರು ಸದಸ್ಯರ ಸದಸ್ಯತ್ವವನ್ನು ಮುಕ್ತಗೊಳಿಸಲಾಗಿದೆ.

ಶಿವಮೊಗ್ಗ(ಜು.26]: ಸರ್ಕಾರ ಬದಲಾಗುತ್ತಿದ್ದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಅಧಿಕಾರದಿಂದ ಮುಕ್ತಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ವಿವಿ ಸಿಂಡಿಕೇಟ್ ಸದಸ್ಯರಿಗೂ ಈ ಬಿಸಿ ತಾಗಿದೆ. ಕುವೆಂಪು ವಿವಿಯ ಸಿಂಡಿಕೇಟ್ ಸದಸ್ಯತ್ವದಿಂದ ಆರು ಜನರನ್ನು ಮುಕ್ತಗೊಳಿಸಲಾಗಿದೆ. ವಿವಿ ಕುಲಸಚಿವ ಪ್ರೊ. ಭೋಜ್ಯಾನಾಯ್ಕ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ವಿವಿಗಳಿಗೆ ಅಧಿಸೂಚನೆಯೊಂದನ್ನು ನೀಡಿ, ಹಿಂದಿನ ಸರ್ಕಾರ ನೇಮಿಸಿದ್ದ ಸಿಂಡಿಕೇಟ್ ಸದಸ್ಯರನ್ನು ಸದಸ್ಯತ್ವದಿಂದ ಮುಕ್ತಗೊಳಿಸುವಂತೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕುವೆಂಪು ವಿವಿ ಸಿಂಡಿಕೇಟ್’ಗೆ ಹಿಂದಿನ ಸರ್ಕಾರ ನೇಮಕ ಮಾಡಿದ್ದ ಆರು ಸದಸ್ಯರ ಸದಸ್ಯತ್ವವನ್ನು ಮುಕ್ತಗೊಳಿಸಲಾಗಿದೆ.

ಅವರುಗಳೆಂದರೆ, ಶಿವಮೊಗ್ಗದ ವಿಶ್ವನಾಥ (ಕಾಶಿ), ಸಾಗರದ ಮೊಸ್ಮದ್ ಜಕ್ರಿಯ, ತರೀಕೆರೆಯ ಅನ್ಬು, ಬೆಂಗಳೂರಿನ ಸುನೀತಾ, ಕೋಲಾರದ ಡಾ.ಟಿ.ವಿ.ನಾರಾಯಣಸ್ವಾಮಿ, ಚಳ್ಳಕೆರೆಯ ಅಶ್ವಥನಾಯಕ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ