ಸಾರಿಗೆ ಬಸ್ ಹಾಗೂ ಗೂಡ್ಸ್ ವಾಹನ,ಟಾಟಾ ಮ್ಯಾಜಿಕ್ ವಾಹನದ ನಡುವೆ ಸರಣಿ ಅಪಘಾತವಾಗಿದೆ. ಬೆಂಗಳೂರು - ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ಹಾಸನ [ಜ.30]: ಸಾರಿಗೆ ಬಸ್ ಹಾಗೂ ಮೂರು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಮೂವರು ಸ್ಥಳದಕ್ಕೇ ಸಾವಿಗೀಡಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಸೂಳೆಕೆರೆ ಬಳಿ ಅಪಘಾತವಾಗಿದೆ. 11ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರು - ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಘಟನೆ ನಡೆದಿದೆ.
ಮಂಗಳೂರು - ಬಳ್ಳಾರಿ ಮತ್ತೊಂದು ಬಸ್ ಸೇವೆ : ಶಿವಮೊಗ್ಗ ಮೂಲಕ ಸಂಚಾರ.
ಕೆಎಸ್ ಆರ್ ಟಿಸಿ ಬಸ್, ಟಾಟಾ ಮ್ಯಾಜಿಕ್ ಹಾಗೂ ಗೂಡ್ಸ್ ಗಾಡಿ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರಸೀಕೆರೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.