ಕೊಡಗು ಮಹಾಮಳೆ ಸಂತ್ರಸ್ತರಿಗೆ ಕೊನೆಗೂ ಮನೆ ಹಂಚಿಕೆ

By Suvarna NewsFirst Published Jun 4, 2020, 10:57 PM IST
Highlights

ಭೀಕರ ನೆರೆಗೆ ಮನೆ ಕಳೆದುಕೊಂಡವರಿಗೆ ಮನೆ/ ಕೊಡಗಿನ ಸಂತ್ರಸ್ತರಿಗೆ ಸ್ಪಂದಿಸಿದ ಸರ್ಕಾರ/ ಎರಡು ವರ್ಷದ ನಂತರ ಮನೆ/ ಕೀ ಹಸ್ತಾಂತರ ಮಾಡಿದ ಸಚಿವ ಆರ್ ಅಶೋಕ್

ಕೊಡಗು(ಜೂ. 04)  ಮಹಾಮಳೆಯಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆಗಳ ಹಸ್ತಾಂತರ ಮಾಡಲಾಗಿದೆ. ಜಂಬೂರು ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಂದ ಮನೆ ಕೀಲಿ ಕೈ ಹಸ್ತಾಂತರಿಸಿದ್ದಾರೆ.

ಸಂತ್ರಸ್ತರಿಗೆ ರಾಜೀವಗಾಂಧಿ ವಸತಿ ನಿಗಮ ನಿಯಮಿತ ಹಾಗೂ ಕೊಡಗು ಜಿಲ್ಲಾಡಳಿತದಿಂದ  ನಿಮಿ೯ಸಲಾದ ಮನೆಗಳಿರುವ ಬಡಾವಣೆಗೆ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರ ಹೆಸರಿಡಲಾಗಿದೆ.

ಕೊಡಗಿನ ಮಹಾಮಳೆಗೆ ಕಾರಣ ಬಹಿರಂಗ

ಜಂಬೂರಿನಲ್ಲಿ 383 ಸಂತ್ರಸ್ತರಿಗೆ ಮನೆ ನೀಡಲಾಗಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಸುನೀಲ್ ಸುಬ್ರಹ್ಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಸದಸ್ಯೆ  ಮುದಾಧಮ೯ಪ್ಪ,ಸೋಮವಾರಪೇಟೆ  ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್,  ಎಸ್‌ಪಿ ಡಾ.ಸುಮನ್ ಪನ್ನೇಕರ್, ಜಿ.ಪಂ.ಮುಖ್ಯಕಾಯ೯ನಿವ೯ಹಣಾಧಿಕಾರಿ ಲಕ್ಷ್ಮಿಪ್ರಿಯ ಸೇರಿದಂತೆ ಇದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಸಂದೇಶ ನೀಡಿದ್ದಾರೆ.  ಪ್ರಕೖತ್ತಿಯ ಅವಕೖಪೆಯಿಂದಾಗಿ ಮನೆ ಕಳೆದುಕೊಂಡ ಜನರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸಕಾ೯ರ ಪ್ರಯತ್ನ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.

click me!