ಶ್ರೀಕೃಷ್ಣದೇವರಾಯ ವಿವಿ ವಿದ್ಯಾರ್ಥಿ, ಸಿಬ್ಬಂದಿ​ಗೆ ಶುಕ್ರವಾರ ಖಾದಿ ಉಡುಪು ಕಡ್ಡಾಯ

Kannadaprabha News   | Asianet News
Published : Aug 16, 2021, 07:01 AM IST
ಶ್ರೀಕೃಷ್ಣದೇವರಾಯ ವಿವಿ ವಿದ್ಯಾರ್ಥಿ, ಸಿಬ್ಬಂದಿ​ಗೆ ಶುಕ್ರವಾರ ಖಾದಿ ಉಡುಪು ಕಡ್ಡಾಯ

ಸಾರಾಂಶ

ವೋಕಲ್‌ ಫಾರ್‌ ಲೋಕಲ್‌ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಘೋಷಣೆ ಶ್ರೀಕೃಷ್ಣ ದೇವ​ರಾಯ ವಿಶ್ವವಿದ್ಯಾಲಯ ಮತ್ತು ಅಧೀನದ ಎಲ್ಲ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಪ್ರತಿ ಶುಕ್ರವಾರ ದೇಸಿ ಖಾದಿ ಪೋಷಾಕು ಕಡ್ಡಾಯ

ಬಳ್ಳಾರಿ (ಆ.16): ವೋಕಲ್‌ ಫಾರ್‌ ಲೋಕಲ್‌ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಘೋಷಣೆಗೆ ಪೂರಕವಾಗಿ ಸ್ಥಳೀಯ ಉದ್ಯಮಗಳಿಗೆ ಪ್ರೊತ್ಸಾಹ ನೀಡಲು ಶ್ರೀಕೃಷ್ಣ ದೇವ​ರಾಯ ವಿಶ್ವವಿದ್ಯಾಲಯ ಮತ್ತು ಅಧೀನದ ಎಲ್ಲ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಪ್ರತಿ ಶುಕ್ರವಾರ ದೇಸಿ ಖಾದಿ ಪೋಷಾಕು ಕಡ್ಡಾಯಗೊಳಿಸಲಾಗಿದೆ.

ಲಾಕ್‌ಡೌನ್‌ ಎಫೆಕ್ಟ್‌: ಆರ್ಥಿಕ ಸಂಕಷ್ಟದಲ್ಲಿ ಖಾದಿ ಉತ್ಪಾದನಾ ಕೇಂದ್ರಗಳು

75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಭಾನುವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ವಿಶ್ವವಿದ್ಯಾಲಯದ ಕುಲಪತಿ ಪೊ›. ಸಿದ್ದು ಪಿ. ಆಲಗೂರ ಅವರು ಈ ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ವಿಶ್ವವಿದ್ಯಾಲಯದಲ್ಲಿ ಖಾದಿ ಬಟ್ಟೆಗಳ ಮಾರಾಟ ಮಳಿಗೆಗಳನ್ನೂ ತೆರೆಯಲಾಗಿತ್ತು. ದೇಸಿ ಉತ್ಪನ್ನಗಳಿಗೆ ಉತ್ತೇಜನ ನೀಡಲು ವಿಶ್ವವಿದ್ಯಾಲಯದ ಸಿಬ್ಬಂದಿ ಬಟ್ಟೆಖರೀದಿಸಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ನೂತನ ವೆಬ್‌ಸೈಟ್‌ ಅವತರಣಿಕೆಯನ್ನು ಕುಲಪತಿ ಉದ್ಘಾಟನೆ ಮಾಡಿದರು.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!