ನೆರೆ ಪರಿಹಾರಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್

Published : Aug 09, 2019, 09:39 PM ISTUpdated : Aug 09, 2019, 09:56 PM IST
ನೆರೆ ಪರಿಹಾರಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್

ಸಾರಾಂಶ

ಕರ್ನಾಟಕದ ಪ್ರವಾಹ ಪರಿಸ್ಥಿತಿ ನಿವಾರಣೆಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಮ್ಮ ನಿಧಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗ ಮಳೆಯಿಂದ ತತ್ತರಿಸಿ ಹೋಗಿದೆ.  

ಬೆಂಗಳೂರು[ಆ. 09]  ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗ ಪ್ರವಾಹದಿಂದ ಮುಳುಗಡೆಯಾಗಿದ್ದು ಪರಿಹಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ 1 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

ಎಂಪಿಎಲ್ ಎಡಿ ಅಂದರೆ ಸಂಸದರ ಪ್ರವೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಿದ್ದು ಉದ್ದಿಮೆದಾರರು ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಕೇರಳ ಪ್ರವಾಹಕ್ಕೆ 30 ಬಲಿ, ಕಾಸರಗೋಡು ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ನಮ್ಮ ರಾಜ್ಯದಲ್ಲಿ ಪ್ರವಾಹವು ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ಸಾವಿರಾರು ಜನರು ಮತ್ತು ಮನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ನನ್ನ ರಾಜ್ಯಸಭಾ ನಿಧಿಯಿಂದ ಪ್ರವಾಹ ಪೀಡಿತರಿಗೆ 1 ಕೋಟಿ ರೂ ಘೋಷಿಸುತ್ತಿದ್ದೇನೆ ಈ ಕಷ್ಟದ ಪರಿಸ್ಥಿತಿಯಲ್ಲಿ ಜನತೆ ಮತ್ತು ಉದ್ಯಮಿಗಳು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ನೀಡಬೇಕೆಂದು ವಿನಂತಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.

 

PREV
click me!

Recommended Stories

ಕಲಬುರಗಿ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡಿದ ಕೋರ್ಟ್; ರೈತನಿಗೆ ಅನ್ಯಾಯವಾಗುವುದನ್ನ ಸಹಿಸದ ನ್ಯಾಯಾಲಯ!
ಉದ್ಯಾನ ನಗರಿ ಬೆಂಗಳೂರಿನ ಗುಲಾಬಿ ಕ್ರಾಂತಿ, ಪಿಂಕ್ ಹೂವುಗಳ ಆಕರ್ಷಣೆಗೆ ಕಾರಣ ಧಾರವಾಡದ ಈ ಮೇರು ವ್ಯಕ್ತಿ!