ಕೆ.ಕಲ್ಯಾಣಗೆ ವಂಚನೆ ಪ್ರಕರಣ : ಮಂತ್ರ​ವಾ​ದಿಯ 9 ಮ್ಯಾಕ್ಸಿಕ್ಯಾಬ್‌ ವಶ

Kannadaprabha News   | Asianet News
Published : Oct 12, 2020, 08:06 AM IST
ಕೆ.ಕಲ್ಯಾಣಗೆ ವಂಚನೆ ಪ್ರಕರಣ : ಮಂತ್ರ​ವಾ​ದಿಯ 9 ಮ್ಯಾಕ್ಸಿಕ್ಯಾಬ್‌ ವಶ

ಸಾರಾಂಶ

ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯ ಕಲಹಕ್ಕೆ ಕಾರಣವಾಗಿದ್ದ ಮಂತ್ರವಾದಿ ಶಿವಾನಂದ ವಾಲಿಯ 9 ಮ್ಯಾಕ್ಸಿ ಕ್ಯಾಬ್ ಸೀಜ್ ಮಾಡಲಾಗಿದೆ 

ಬೆಳಗಾವಿ (ಅ.12): ಖ್ಯಾತ ಚಲನಚಿತ್ರ ಗೀತ ರಚನೆಕಾರ ಕೆ.ಕಲ್ಯಾಣ್‌ ದಾಂಪತ್ಯದಲ್ಲಿ ಕಲಹಕ್ಕೆ ಕಾರಣ ಹಾಗೂ ಲಕ್ಷಾಂತರ ರು. ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಮಂತ್ರವಾದಿ ಶಿವ​ನಾಂದ ವಾಲಿ ಒಡೆತನದಲ್ಲಿದ್ದ 9 ಮ್ಯಾಕ್ಸಿಕ್ಯಾಬ್‌ಗಳನ್ನು ನಗರದ ಮಾಳಮಾರುತಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಕಲ್ಯಾಣ್‌ ಪತ್ನಿ ಅಶ್ವಿನಿ, ಅತ್ತೆ, ​ಮಾವರನ್ನು ಅಪಹರಿಸಿ, ಪುಸಲಾಯಿಸಿ ಹಣ​, ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಕಲ್ಯಾಣ್‌ ಮನೆ ಕೆಲಸದಾಕೆ ಗಂಗಾ, ವಾಲಿ ವಿರುದ್ಧ ದೂರು ನೀಡಿದ್ದರು.

ಕವಿ ಕಲ್ಯಾಣ್‌ ಜೀವನದಲ್ಲಿ ನಿಜಕ್ಕೂ ನಡೆದದ್ದೇನು? ..

 ಈ ಹಿನ್ನೆಲೆಯಲ್ಲಿ ಬಾಗಲಕೋಟೆಯ ವಾಲಿಯನ್ನು ಕೆಲ ದಿನಗಳ ಹಿಂದೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಲ್ಯಾಣ್‌ ಪತ್ನಿ, ಅತ್ತೆ​, ಮಾವನ ಅಕೌಂಟ್‌ನಿಂದ ಸುಮಾರು 45 ಲಕ್ಷ ರು. ಹಾಗೂ ಕೋಟ್ಯಂತರ ರು. ಆಸ್ತಿ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಹಣದಿಂದ ಶಿವಾನಂದ ಖರೀದಿಸಿದ್ದ 9 ಮ್ಯಾಕ್ಸಿಕ್ಯಾಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

PREV
click me!

Recommended Stories

ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!
ಲೋಕಾಯುಕ್ತ ದಾಳಿ: ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!