'ನಟ ಭಯಂಕರ' ಚಿತ್ರ ತಂಡದೊಂದಿಗೆ ಬಡವರಿಗೆ ನೆರವಾದ ಜಾರಕಿಹೊಳಿ ಕುಟುಂಬದ ಕುಡಿ!

Published : Apr 21, 2020, 02:49 PM IST
'ನಟ ಭಯಂಕರ' ಚಿತ್ರ ತಂಡದೊಂದಿಗೆ ಬಡವರಿಗೆ ನೆರವಾದ ಜಾರಕಿಹೊಳಿ ಕುಟುಂಬದ ಕುಡಿ!

ಸಾರಾಂಶ

ಒಳ್ಳೆ ಹುಡುಗ ಪ್ರಥಮ್‌ ಅವರ ಒಂದು ವಾಟ್ಸಪ್ ಸ್ಟೇಟಸ್‌ ನೋಡಿ ಬಡ ಹಾಗೂ ನಿರ್ಗತಿಕರ ಪರವಾಗಿ ಜಾರಕಿಹೊಳಿ ಕುಟುಂಬದ ಕುಡಿ ಕೈಜೋಡಿಸಿದೆ.

ಬೀದರ್, (ಏ.22): ಬಿಗ್ ಬಾಸ್ ಒಳ್ಳೆ ಹುಡುಗ ಪ್ರಥಮ್ ನಟನೆ, ನಿರ್ದೇಶನದ 'ನಟ ಭಯಂಕರ' ಸಿನಿಮಾ ತಂಡ ಬೀದರ್‌ನಲ್ಲಿ ಮನೆ ಮನೆಗೆ ತರಕಾರಿ, ರೇಷನ್ ಹಂಚುತ್ತಿದೆ. 

ಇದೀಗ ಈ ಕೆಲಸಕ್ಕೆ ಜಾರಕಿಹೊಳಿ ಕುಟುಂಬಸ್ಥರು ಸಾಥ್ ನೀಡಿದ್ದಾರೆ.  ನಟ ಭಯಂಕರ ಫ್ಯಾನ್ಸ್ ಹುಡುಗರು ಬೆಂಗಳೂರಿನಿಂದ ಬೈಕಿನಲ್ಲಿ ಹೋಗಿ ಬೀದರ್‌ನಲ್ಲಿ ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. 

ಬಡ, ನಿರ್ಗತಿಕರಿಗೆ ನಟ 'ಭಯಂಕರ' ಸಹಾಯ ಮಾರ್ರೆ!

ಅದನ್ನು ಪ್ರಥಮ್ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಭೀಮಸೇನಾ ಜಾರಿಕಿಹೊಳಿ ಮಗ ಸರ್ವೋತ್ತಮ ಜಾರಕಿಹೊಳಿ ಹಣ ಸಹಾಯ ಮಾಡಿದ್ದಾರೆ.

ಇಂಜಿನಿಯರಿಂಗ್  ವ್ಯಾಸಂಗ ಮಾಡುತ್ತಿರುವ ಸರ್ವೋತ್ತಮ ಜಾರಕಿಹೊಳಿ ತಮ್ಮ ಉಳಿತಾಯದ ಹಣವನ್ನು ಬೀದರ್‌ನಲ್ಲಿ ನಟ ಭಯಂಕರ ಫ್ಯಾನ್ಸ್  ಗ್ರೂಪ್‌ಗೆ ನೀಡಿ ಬಡ, ನಿರ್ಗತಿಕರ ಸಹಾಯ ಮಾಡಿದ್ದರೆ. ಇದಕ್ಕೆ ಒಳ್ಳೆ ಹುಡುಗ ಪ್ರಥಮ್ ತಮ್ಮ ಹುಡುಗರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ನಟ ಭಯಂಕರ ಫ್ಯಾನ್ಸ್ ಹುಡುಗರ ತಂಡವೊಂದು ಬೈಕ್‌ನಲ್ಲಿ ಬಡ ಮತ್ತು ನಿರ್ಗತಿಕರ ಮನೆ-ಮೆನೆಗೆ ತೆರಳಿ ಆಹಾರ ಪದಾರ್ಥಗಳನ್ನು ಹಂಚಿ ಒಳ್ಳೆ ಕಾರ್ಯದಲ್ಲಿ ತೊಡಗಿದ್ದಾರೆ.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!