ಉತ್ತರ ಕನ್ನಡ: ಯಲ್ಲಾಪುರದಲ್ಲಿ ಕುತೂಹಲ ಮೂಡಿಸಿದ ಹ್ಯಾಲಿಕಾಪ್ಟರ್ ಹಾರಾಟ..!

Published : Dec 02, 2023, 03:00 AM IST
ಉತ್ತರ ಕನ್ನಡ: ಯಲ್ಲಾಪುರದಲ್ಲಿ ಕುತೂಹಲ ಮೂಡಿಸಿದ ಹ್ಯಾಲಿಕಾಪ್ಟರ್ ಹಾರಾಟ..!

ಸಾರಾಂಶ

ಕೃಷಿ ಮತ್ತು ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮೀಕ್ಷೆಗಾಗಿ ಈ ಹಾರಾಟ ನಡೆದಿದೆಯೇನೋ ಎಂಬ ಊಹೆ ಮಾಡಲಾಗಿದೆ.

ಯಲ್ಲಾಪುರ(ಡಿ.02): ತಾಲೂಕಿನ ವಜ್ರಳ್ಳಿಯ ಸುತ್ತಮುತ್ತಿನ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ಕಂದು ಬಣ್ಣದ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು, ಈ ಕುರಿತು ಸ್ಥಳೀಯರಲ್ಲಿ ತೀವ್ರ ಆಸಕ್ತಿ ಮತ್ತು ಕುತೂಹಲ ಗರಿಗೆದರಿದೆ. ಕೃಷಿ ಮತ್ತು ಅರಣ್ಯ ಪ್ರದೇಶದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ನಡೆಸಿದ್ದು, ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಸಮೀಕ್ಷೆಗಾಗಿ ಈ ಹಾರಾಟ ನಡೆದಿದೆಯೇನೋ ಎಂಬ ಊಹೆ ಮಾಡಲಾಗಿದೆ.

ವಜ್ರಳ್ಳಿ, ಹೊನ್ನಗದ್ದೆ, ಕೊಡ್ಲಗದ್ದೆ ಗ್ರಾಮದ ಮೇಲ್ಗಡೆ ಈ ಹಾರಾಟ ನಡೆದಿದ್ದು, ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಐದಾರು ಕಿಮೀ ವ್ಯಾಪ್ತಿಯಲ್ಲಿ ವೃತ್ತಾಕಾರವಾಗಿ ಹಾಗೂ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ತನ್ನ ಹಾರಾಟ ನಡೆಸಿದ ಈ ಹೆಲಿಕಾಪ್ಟರ್ ಗುರುವಾರವೂ ಎರಡು ಬಾರಿ ಹಾರಾಟ ನಡೆಸಿತ್ತು.

ಉತ್ತರಕನ್ನಡ: ಹೊನ್ನಾವರದ ಇಡಗುಂಜಿ ದೇವಸ್ಥಾನದಲ್ಲಿ ಪಂಕ್ತಿಬೇಧ...?

ಸಮೀಪದಲ್ಲಿ ಕೈಗಾ ಅಣು ಸ್ಥಾವರ, ಕಾಳಿ ನದಿಯ ಕೊಡಸಳ್ಳಿ, ಕದ್ರಾ ಜಲಾಶಯ, ದೂರದಲ್ಲಿ ಸೀಬರ್ಡ್ ನೌಕಾನೆಲೆ ಇರುವುದರಿಂದ ಇಂತಹ ಸಮೀಕ್ಷೆ ಕಾರ್ಯದ ಕುರಿತು ಸಾರ್ವಜನಿಕವಾಗಿ ಸ್ಥಳೀಯ ಆಡಳಿತಕ್ಕೆ ಮಾಹಿತಿ ಇಲ್ಲದಿರುವುದು ಅಚ್ಚರಿಗೂ ಕಾರಣವಾಗಿದೆ.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು