ಕೋಲಾರ : ಕಾಣೆಯಾಗಿದ್ದ ಹೋಂ ಗಾರ್ಡ್ ಶವವಾಗಿ ಪತ್ತೆ

Published : Jun 05, 2019, 08:47 PM IST
ಕೋಲಾರ : ಕಾಣೆಯಾಗಿದ್ದ ಹೋಂ ಗಾರ್ಡ್ ಶವವಾಗಿ ಪತ್ತೆ

ಸಾರಾಂಶ

ಕಾಣೆಯಾಗಿದ್ದ ಹೋಂ ಗಾರ್ಡ್ ಶವವಾಗಿ ಪತ್ತೆ| ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಅಲಾಲಸಂದ್ರೆ ಗೇಟ್ ಬಳಿ ಪತ್ತೆ| ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ದುಷ್ಕರ್ಮಿಗಳು.

ಕೋಲಾರ, [ಜೂನ್.05]: ಕಾಣೆಯಾಗಿದ್ದ ಹೋಂ ಗಾರ್ಡ್ ಶವ ಪತ್ತೆಯಾಗಿದೆ. ಇಂದು [ಬುಧವಾರ] ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಅಲಾಲಸಂದ್ರೆ ಗೇಟ್ ಬಳಿ ಶವ ಪತ್ತೆಯಾಗಿದೆ.

ನಾರಾಯಣ ರೆಡ್ಡಿ (38) ಕೊಲೆಯಾದ ವ್ಯಕ್ತಿ. ನಾರಾಯಣ ರೆಡ್ಡಿ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೋಲಾರ ಎಸ್ಪಿ‌ ರೋಹಿಣಿ ಕಠೋಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದ್ದು,  ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

PREV
click me!

Recommended Stories

ದಲಿತರನ್ನು ಸಿಎಂ ಮಾಡದೇ ವಂಚಿಸುತ್ತಿರುವ ಕಾಂಗ್ರೆಸ್‌: ಛಲವಾದಿ ನಾರಾಯಣಸ್ವಾಮಿ ಟೀಕೆ
‘ಲೋ ನವೀನ’ ಸಿನಿಮಾ ಹಳ್ಳಿ ಸೊಗಡಿನಿಂದ ಪ್ರೇಕ್ಷಕರ ಮನಗೆದ್ದಿದೆ: ನವೀನ್ ಸಜ್ಜು ಹರ್ಷ