ಸಿದ್ದು ಸೋಲಿಗೆ ಕಾರಣ ಗೊತ್ತು, ಹೆಸರು ಬಹಿರಂಗ ಅಸಾಧ್ಯ: ಕೈ ಮುಖಂಡ

By Kannadaprabha NewsFirst Published Dec 20, 2020, 7:33 AM IST
Highlights

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿನ ಹಿಂದಿನ ಕಾರಣ ಯಾರು ಎನ್ನುವುದು ಗೊತ್ತು ಎಂದು ಕೈ ಮುಖಂಡರೋರ್ವರು ಹೇಳಿದ್ದಾರೆ. 

ಮೈಸೂರು (ಡಿ.20): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಯಾರು ಕಾರಣ ಎಂಬುದು ಗೊತ್ತು. ಆದರೆ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಸ್ವಪಕ್ಷಿಯರಿಂದಲೇ ತನಗೆ ಸೋಲಾಯಿತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಚುನಾವಣೆಯಲ್ಲಿ ಕೆಲವರ ಆಸೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. 

ಕುಮಾರಸ್ವಾಮಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು ನಿಜ ಅಲ್ವಾ? ಎಚ್‌ಡಿಕೆಗೆ ಸಿದ್ದು ತಿರುಗೇಟು..!

ಇವರೆಲ್ಲ ವಿರೋಧ ಪಕ್ಷದವರ ಜೊತೆ ಕೈ ಜೋಡಿಸಿದರು. ಇದೇ ನನ್ನ ಮತ್ತು ಸಿದ್ದರಾಮಯ್ಯ ಸೋಲಿಗೆ ಕಾರಣವಾಯಿತು ಎಂದರು. 1999 ಚುನಾವಣೆಯಲ್ಲೇ ಸಿದ್ದರಾಮಯ್ಯರಿಗೆ ಹೇಳಿದ್ದೆ. ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ ಎಂದರು.

click me!