ತುಮಕೂರು: 4 ಲಕ್ಷ ಲಂಚ ಪಡೆದವನಿಗೆ 4 ವರ್ಷ ಜೈಲು

Published : Aug 15, 2019, 11:47 AM IST
ತುಮಕೂರು: 4 ಲಕ್ಷ ಲಂಚ ಪಡೆದವನಿಗೆ 4 ವರ್ಷ ಜೈಲು

ಸಾರಾಂಶ

4,000 ಲಂಚ ಪಡೆಯುವಾಗ ಸಿಕ್ಕಿಬಿದ್ದ ಸರ್ಕಾರಿ ಸರ್ವೇಯರ್‌ಗೆ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಿದೆ. ಕುಣಿಗಲ್‌ ತಾಲೂಕು ಸತೀಶ್‌ ಕುಮಾರ್‌ ಎಂಬಾತ 2014ರಲ್ಲಿ ವ್ಯಕ್ತಿಯೊಬ್ಬರಿಂದ ಜಮೀನಿನ ಅಳೆತೆಗೆ ನಾಲ್ಕು ಸಾವಿರ ಲಂಚ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ತುಮಕೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ತುಮಕೂರು(ಆ.15): ನಾಲ್ಕು ಸಾವಿರ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಸರ್ಕಾರಿ ಸರ್ವೇಯರ್‌ ಒಬ್ಬರಿಗೆ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಿದೆ.

ಕುಣಿಗಲ್‌ ತಾಲೂಕು ಸತೀಶ್‌ ಕುಮಾರ್‌ ಎಂಬಾತ 2014ರಲ್ಲಿ ವ್ಯಕ್ತಿಯೊಬ್ಬರಿಂದ ಜಮೀನಿನ ಅಳೆತೆಗೆ ನಾಲ್ಕು ಸಾವಿರ ಲಂಚ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ತುಮಕೂರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲೋಕಯುಕ್ತ ಇನ್ಸ್‌ಪೆಕ್ಟರ್‌ ಗೌತಮ್‌ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಲಂಚದ ಸಮೇತ ಸಿಕ್ಕಿಬಿದ್ದಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಿದೆ. ಲೋಕಾಯುಕ್ತ ಪರವಾಗಿ ವಿಶೇಷ ಆಭಿಯೋಜಕ ಎನ್‌.ಬಸವರಾಜು ವಾದ ಮಂಡಿಸಿದ್ದರು.

PREV
click me!

Recommended Stories

ಕಾರದ ಮಠದ ಪೀಠಾಧ್ಯಕ್ಷರಾದ ವೀರಬಸವ ಸ್ವಾಮೀಜಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಸಿದ್ದಗಂಗಾ ಮಠಕ್ಕೆ ಪಾದಯಾತ್ರೆ
ನಾಳೆಯಿಂದ ಬೆಂಗಳೂರು ಹೃದಯಭಾಗದ ರಸ್ತೆಯಲ್ಲಿ ಕಾಮಗಾರಿ, 15 ದಿನ ಟ್ರಾಫಿಕ್ ಸಂಕಷ್ಟ ತಪ್ಪಿದ್ದಲ್ಲ