ಬಜೆಟ್‌ನಲ್ಲಿ ತಾರತಮ್ಯ ಮಾಡದೆ ಅನುದಾನ ನೀಡಿ: ಸಿಪಿಐ ಮನವಿ

By Kannadaprabha NewsFirst Published Feb 9, 2023, 6:00 AM IST
Highlights

ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳಂತೆ ತಾರತಮ್ಯ ಮಾಡದೆ ಅನುದಾನ ನೀಡಲು ಆಗ್ರಹಿಸಿ ಭಾರತ ಕಮ್ಯೂನಿಷ್ಟಪಕ್ಷ(ಮಾಕ್ರ್ಸವಾದಿ) ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

 ತುಮಕೂರು :  ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳಂತೆ ತಾರತಮ್ಯ ಮಾಡದೆ ಅನುದಾನ ನೀಡಲು ಆಗ್ರಹಿಸಿ ಭಾರತ ಕಮ್ಯೂನಿಷ್ಟಪಕ್ಷ(ಮಾಕ್ರ್ಸವಾದಿ) ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಹಣ್ಯ ದೇಶದ ವು ನಾಗರಿಕರಿಗೆ ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ನಡೆಸಿಕೊಳ್ಳುವ ಕರ್ತವ್ಯವನ್ನು ಸರ್ಕಾರಕ್ಕೆ ನೀಡಿದೆ. ಸರ್ವರಿಗೂ ಸಮಭಾವದಿಂದ ಅವರ ಅವರ ಪಾಲನ್ನು ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಜೊತೆಯಲ್ಲಿ ತಾರತಮ್ಯದಿಂದ ನಡೆದುಕೊಳ್ಳುತ್ತಿರುವುದನ್ನು ಇತ್ತೀಚೆಗೆ ನಾಗರಿಕ ಸಮಾಜವು ಚಿಂತಿಸುವಂತೆ ಮಾಡಿದೆ. ಈ ಹಿಂದೆ ಭಾರತ ಸರ್ಕಾರವು ಅಲ್ಪಸಂಖ್ಯಾತರ ಸ್ಥಿತಿ-ಗತಿಗಳನ್ನು ಅಧ್ಯಯನ ಮಾಡಲು ರೂಪಿಸಿದ ಡಾ. ರಾಜೇಂದ್ರ ಸಿಂಗ್‌ ಸಾಚರ್‌ ಹಾಗೂ ನ್ಯಾ. ರಂಗನಾಥ ಮಿಶ್ರ ಸಮಿತಿಗಳ ಶಿಫಾರಸುಗಳನ್ನು ನೋಡಿದರೆ ಭಾರತ / ಕರ್ನಾಟಕದ ಸಮುದಾಯಗಳ ಸ್ಥಿತಿ- ಗತಿಗಳ ಚಿತ್ರಣವು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಸರ್ಕಾರ ಸಂವಿಧಾನದ ರಕ್ಷಣೆ ಮತ್ತು ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ನಿಲ್ಲುವಂತೆ ಜಿಲ್ಲಾ ಸಮಿತಿ ಸದಸ್ಯ ಸಿ.ಅಜ್ಜಪ್ಪ ಸರ್ಕಾರವನ್ನು ಒತ್ತಾಯಿಸಿದರು.

ಇಂತಿಯಾಜ್‌ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯಗಳು ಅದರಲ್ಲೂ ಮುಸ್ಲಿಂರ ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಗಮನ ನೀಡುವುದು. ಸರ್ಕಾರ ಈ ಸಮುದಾಯದ ವಿದ್ಯಾರ್ಥಿಗಳ ಪೋ›ತ್ಸಾಹಿಸಲು ವಿದ್ಯಾರ್ಥಿ ವೇತನ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಸೌಲಭ್ಯವನ್ನು ನೀಡುವುದು, ಉನ್ನತ ಶಿಕ್ಷಣದಲ್ಲಿ ಈ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು, ಕಡಿತ ಮಾಡಿರುವ ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಮತ್ತು ಅವಕಾಶಗಳನ್ನು ಮರು ಜಾರಿಗೊಳಿಸಬೇಕೆಂದರು.

ನಗರ ಸಮಿತಿ ಸದಸ್ಯ ಇಬ್ರಾಹಿಂ ಖಲೀಲ್‌ ಮಾತನಾಡಿ, ಅಲ್ಪ ಸಂಖ್ಯಾತರಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸ್ವಯಂ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು, ಕುಶಲ ಕಾರ್ಮಿಕರಿಗೆಗೆ, ಪಾರಂಪರಿಕ ವೃತ್ತಿಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಕುಶಲ ಕಾರ್ಮಿಕರಿಗೆ ಅನೌಪಚಾರಿಕ ವೃತ್ತಿ ಶಿಕ್ಷಣದ ಅಲ್ಪವಾಧಿ ಕೋರ್ಸ್‌ಗಳನ್ನು ಆರಂಭಿಸುವುದು, ಅದರ ಆಧಾರದಲ್ಲಿ ಬ್ಯಾಂಕ್‌ ಸಾಲಗಳನ್ನು ನೀಡುವ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕೆಂದರು.

ವಸೀಂ ಅಕ್ರಮ ಮಾತನಾಡಿ, ಅವರ ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶಗಳನ್ನು ನೀಡುವುದಲ್ಲದೆ, ಈ ಪ್ರದೇಶಗಳಲ್ಲಿ ಶಾಲಾ- ಕಾಲೇಜು ಮತ್ತು ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸುವುದು, ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು, ಆಸ್ಪತ್ರೆ, ಶಾಲೆ, ರಸ್ತೆ, ಕುಡಿಯುವ ನೀರು ಒದಗಿಸಲು, ವಸತಿಹೀನರಿಗೆ ವಸತಿ ಕಲ್ಪಿಸಲು ಸರ್ಕಾರ ಆದ್ಯತೆ ನೀಡಬೇಕೆಂದರು.

ಮನವಿಯನ್ನು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಸಮಿತಿ ಸದಸ್ಯ ಸೈಯದ್‌ ಮುಜೀಬ್‌, ಲಕ್ಷ್ಮೀಕಾಂತ್‌, ಆರ್‌.ಎಸ್‌.ಚನ್ನಬಸವಣ್ಣ, ದೂಡ್ಡನಂಜಪ್ಪ, ಶಂಕರಪ್ಪ, ಗಂಗಾಧರ್‌, ಬಾಬು ಖಾಸೀಂ, ಶಹತಾಜ್‌, ಬಸವರಾಜು, ಸುಧಾಕರ್‌ ಮುಂತಾದವರು ಭಾಗವಹಿಸಿದ್ದರು.

ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡಗಳಲ್ಲಿ ಅಲ್ಪಸಂಖ್ಯಾತರು ಹಿಂದೆ ಬಿದ್ದಿರುವುದನ್ನು ಗೋಚರಿಸುತ್ತದೆ. ದೇಶದ ಒಟ್ಟಾರೆ ಅಭಿವೃದ್ಧಿಯು ಈ ಸಮುದಾಯದ ಹೊರಗಿಟ್ಟು ಸಾಧಿಸಲಾಗದು, ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕರ್ನಾಟಕದ 2023-24 ನೇ ಸಾಲಿನ ಆಯವ್ಯಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ಧಿಗೆ ನ್ಯಾಯೋಜಿತವಾದ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು.

ಎನ್‌.ಕೆ.ಸುಬ್ರಹಣ್ಯ ಜಿಲ್ಲಾ ಕಾರ್ಯದರ್ಶಿ ಸಿಪಿಐ (ಎಂ)

click me!