ಮಗನಿಗೆ ಕೆಲಸ ಕೊಡುವಂತೆ ಮೈಗೆ ಮಲ ಬಳಿದುಕೊಂಡು ವ್ಯಕ್ತಿಯ ವಿಚಿತ್ರ ಪ್ರತಿಭಟನೆ!

Published : Aug 06, 2025, 04:14 PM IST
Gadag Protest

ಸಾರಾಂಶ

ಲಕ್ಷ್ಮೇಶ್ವರ ಪುರಸಭೆಯಲ್ಲಿ ಮಗನಿಗೆ ಕೆಲಸ ಕೊಡಿಸುವಂತೆ ವ್ಯಕ್ತಿಯೊಬ್ಬ ಮೈಗೆ ಮಲ ಬಳಿದುಕೊಂಡು ವಿಚಿತ್ರ ಪ್ರತಿಭಟನೆ ನಡೆಸಿದ್ದಾರೆ. 40 ವರ್ಷಗಳ ಕಾಲ ಪುರಸಭೆಯಲ್ಲಿ ಕಾರ್ಮಿಕನಾಗಿ ಸೇವೆ ಸಲ್ಲಿಸಿದ್ದ ಸುರೇಶ್ ಎಂಬುವವರು ಈ ಪ್ರತಿಭಟನೆ ನಡೆಸಿದ್ದು, ಪೊಲೀಸರು ಸಮಾಧಾನಪಡಿಸಿ ಕಳುಹಿಸಿದ್ದಾರೆ.

ಗದಗ (ಆ.6): ಮಗನಿಗೆ ಕೆಲಸ ಕೊಡುವಂತೆ ಮೈಗೆ ಮಲ ಬಳಿದುಕೊಂಡು ಪುರಸಭೆ ಎದುರು ವ್ಯಕ್ತಿಯೊಬ್ಬ ವಿಚಿತ್ರ ಪ್ರತಿಭಟನೆ ಮಾಡಿದ್ದಾನೆ. ಲಕ್ಷ್ಮೇಶ್ವರ ಪುರಸಭೆ ಎದುರು ಮಗನಿಗೆ ಕೆಲಸ ಕೊಡುವಂತೆ ವ್ಯಕ್ತಿ ಮಾಡಿರುವ ವಿಚಿತ್ರ ಪ್ರತಿಭಟನೆ ಕಂಡು ಜನರೇ ದಂಗಾಗಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪುರಸಭೆ ಕಚೇರಿ ಆವರಣದಲ್ಲಿ ವ್ಯಕ್ತಿ ಪ್ರತಿಭಟನೆ ಮಾಡಿದ್ದಾರೆ. ಸುರೇಶ್ ಬಸವನಾಯಕ್ ಎಂಬಾತನಿಂದ ಧರಣಿ ಸತ್ಯಾಗ್ರಹ ಮಾಡಿದ್ದ. ಪುರಸಭೆಯಲ್ಲಿ ಮಗನಿಗೆ ಕೆಲಸ ಕೊಡುವಂತೆ ಆತ ಪಟ್ಟು ಹಿಡಿದಿದ್ದ. ಇದಕ್ಕಾಗಿ ಮೈಗೆ ಮಲ ಬಳಿದುಕೊಂಡು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

40 ವರ್ಷದಿಂದ ಪುರಸಭೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ಈಗ ಮಗನಿಗೆ ಕೆಲಸ ಕೊಡಿ ಎಂದು ಸುರೇಶ್‌ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಪುರಸಭೆಯವರು ಮ್ಯಾನ್ ಪವರ್ ಏಜನ್ಸಿ ಮೂಲಕ ಅರ್ಜಿ ಹಾಕುವಂತೆ ಹೇಳಿದ್ದಾರೆ. ಆದರೆ ಪಟ್ಟು ಸಡಿಲಿಸದ ಸುರೇಶ ತನ್ನ ತೋಳುಗಳಿಗೆ ಮಲ ಬಳಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.

ವಿಚಿತ್ರ ಪೊಟೆಸ್ಟ್ ನಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಹೊತ್ತಿನ ಬಳಿಕ ಸುರೇಶನಿಗೆ ಸಮಾಧಾನ ಮಾಡಿ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ.

 

PREV
Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ