ಕೊಳಗೇರಿ ನಿವಾಸಿಗಳಿಗೆ ಉಚಿತ ಮನೆ ಹಂಚಿಕೆ

Kannadaprabha News   | Asianet News
Published : Feb 01, 2021, 09:57 AM IST
ಕೊಳಗೇರಿ ನಿವಾಸಿಗಳಿಗೆ ಉಚಿತ ಮನೆ ಹಂಚಿಕೆ

ಸಾರಾಂಶ

ಕೊಳಗೇರಿ ನಿವಾಸಿಗಳಿಗೆ ಲಾಟರಿ ಎತ್ತುವ ಮೂಲಕ ಮನೆಗಳ ಹಂಚಿಕೆ ಮಾಡಲಾಗಿದೆ. ವಿವಿಧ ಕೊಳಗೇರಿ ನಿವಾಸಿಗಳು ಇದರ ಅಡಿ ಮನೆಗಳನ್ನು ಪಡೆದುಕೊಂಡರು. 

 ಮೈಸೂರು (ಫೆ.01):  ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಾದವಗಿರಿ ರೈಲ್ವೆ ಲೈನ್‌ ಪಕ್ಕದ ಕೊಳೆಗೇರಿಯಲ್ಲಿ ಹಾಗೂ ಬಂಬೂಬಜಾರ್‌ ರೈಲ್ವೆ ಹಳಿಯ ಪಕ್ಕದಲ್ಲಿನ ಮೈಸೂರು ಸಾಮಿಲ್‌ ಪ್ರದೇಶದ ಕೊಳೆಗೇರಿಯಲ್ಲಿ ವಾಸವಾಗಿದ್ದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಲಾಟರಿ ಮೂಲಕ ನರ್ಮ್ ಮನೆಗಳನ್ನು ಹಂಚಲಾಯಿತು.

ಸುಮಾರು 25- 30 ವರ್ಷಗಳಿಂದ ಮೂಲಭೂತ ಸೌಕರ್ಯವಿಲ್ಲದೇ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದ ಅರ್ಹರಿಗೆ ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್. ನಾಗೇಂದ್ರ ಅವರು ಪಾರದರ್ಶಕವಾಗಿ ಮನೆಗಳನ್ನು ಲಾಟರಿ ಎತ್ತುವ ಮೂಲಕ ಹಂಚಿದರು.

ಕೆಸರೆ ಸರ್ವೆ ನಂ.484/1, 484/2 ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ ಕೊಳಚೆ ಪ್ರದೇಶದ ಒಟ್ಟು 252 ಕುಟುಂಬಗಳಿಗೆ ಜೆಎನ್‌ ನರ್ಮ್- ಬಿಎಸ್‌ಯುಪಿ ಯೋಜನೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ಶುದ್ಧ ಕುಡಿಯುವ ನೀರು, ಸಮುದಾಯ ಭವನ, ಅಂಗನವಾಡಿ ಕಟ್ಟಡ, ಉದ್ಯಾನಗಳನ್ನೊಳಗೊಂಡಂತೆ ನಿರ್ಮಿಸಲಾಗಿದೆ.

ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಇಲ್ಲ ಅನುದಾನ ...

ಈ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದರೂ ಲಾಟರಿ ಮೂಲಕ ಮನೆ ಹಂಚಿಕೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಾಗದವರಿಗೆ ಅವರ ಹೆಸರನ್ನು ಕೂಗಿ ಲಾಟರಿ ಎತ್ತಿ ಅವರಿಗೆ ಬಂದ ಮನೆಸಂಖ್ಯೆಯನ್ನು ಗುರುತಿಸಿ ದಾಖಲಿಸಲಾಯಿತು. ಈ ಪ್ರಕ್ರಿಯೆಗೆ ಹಾಜರಾಗದವರು ಹೈವೆ ಸರ್ಕಲ್‌ ಬಳಿಯಿರುವ ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿ ಕಚೇರಿಗೆ ಭೇಟಿ ನೀಡಿ, ದಾಖಲೆಗಳನ್ನು ಸಲ್ಲಿಸಿ ಮನೆ ಸಂಖ್ಯೆಗಳನ್ನು ಪಡೆಯುವಂತೆ ತಿಳಿಸಲಾಯಿತು.

ಮನೆ ಹಂಚಿಕೆಯಾದ ಎಲ್ಲಾ ಕುಟುಂಬಗಳಿಗೂ ಈ ಹಿಂದೆಯೇ ನೋಟೀಸ್‌ ನೀಡಿರುವಂತೆ 10 ದಿವಸದ ಒಳಗಾಗಿ ಹಾಲಿ ವಾಸವಿರುವ ಶೆಡ್‌ಗಳನ್ನು, ತಾತ್ಕಾಲಿಕ ನಿರ್ಮಿತ ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು.

PREV
click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಬೆಂಗಳೂರಿನ ಗುಲಾಬಿ ಮೆಟ್ರೋ ಮಾರ್ಗಕ್ಕೆ ಶೀಘ್ರ ಪ್ರೊಟೊಟೈಪ್‌ ರೈಲು