ವಂಚನೆ ಪ್ರಕರಣ: ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಜೈಲು

Published : Oct 25, 2018, 09:03 PM IST
ವಂಚನೆ ಪ್ರಕರಣ: ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಜೈಲು

ಸಾರಾಂಶ

ಉದ್ಯಮಿ ಮತ್ತು ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ.  ಚಿತ್ರದುರ್ಗ ಪ್ರಧಾನ ಜೆಂಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದ್ದು10 ಸಾವಿರ ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಚಿತ್ರದುರ್ಗ[ಅ.25] ಹೋಟೆಲ್ ಉದ್ಯಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಚಿತ್ರದುರ್ಗ ಪ್ರಧಾನ ಜೆಂಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದ್ದು10 ಸಾವಿರ ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ನವೀನ್ ಹೋಟೆಲ್ನ ನಿರ್ದೇಶಕರಾಗಿರುವ  ನಿರ್ದೇಶಕ ಕೆ.ಎಸ್. ನವೀನ್ ಗೆ ಶಿಕ್ಷೆಗೆ ಗುರಿಯಾಗಿದ್ದಾರೆ. ನ್ಯಾಯಾಧೀಶ ಶಮೀರ್. ಪಿ. ನಂದಿಹಾಳ್ ಆದೇಶ ನೀಡಿದ್ದಾರೆ. ಕಾರ್ಮಿಕ ರಾಜ್ಯ ವಿಮಾ ನಿಗಮಕ್ಕೆ ಹಣ ಕಟ್ಟದೆ ವಂಚನೆ ಮಾಡಿರುವ ಆರೋಪ ಸಾಬೀತಾಗಿದ್ದು ಶಿಕ್ಷೆಗೆ ಗುರಿಯಾಗಿದ್ದಾರೆ. 

2012-13 ನೇ ಸಾಲಿನಲ್ಲಿ 1,54,440 ರೂ. ಹಣ ಕಟ್ಟದೆ ವಂಚನೆ ಮಾಡಿರುವ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಸರ್ಕಾರಿ ಅಭಿಯೋಜಕ ಪಿ.ಪಿ.ತಿಪ್ಪೇಸ್ವಾಮಿರಿಂದ ಸರ್ಕಾರ ಪರ ವಾದ ಮಂಡನೆ ಮಾಡಿದ್ದರು. ಕಾರ್ಮಿಕ ವಿಮಾ ನಿಗಮ ಚಿತ್ರದುರ್ಗ ವಿಭಾಗ ಪ್ರಕರಣ ದಾಖಲಿಸಿತ್ತು.

PREV
click me!

Recommended Stories

ಯುಗಾದಿ ಹಬ್ಬ ಮಾಡುತ್ತಿದ್ದವರ ಮೇಲೆ ಆಸಿಡ್ ಎರಚಿದ ಸುಹಿಲ್ ಭಾಷಾ; ಮಗು ಸೇರಿ ಐವರಿಗೆ ಗಾಯ, ಒಬ್ಬರ ಸ್ಥಿತಿ ಗಂಭೀರ!
ಭೀಕರ ಅಪಘಾತದಲ್ಲಿ ಮೃತಪಟ್ಟ ಮೂವರು ಯುವ ಇನ್ಸ್‌ಪೆಕ್ಟರ್‌ಗಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ; ಸಿಎಂ ಘೋಷಣೆ