2 ಪ್ರತ್ಯೇಕ ಅಪಘಾತದಲ್ಲಿ ಐವರು ದಾರುಣ ಸಾವು

Published : Jun 16, 2019, 09:57 PM ISTUpdated : Jun 16, 2019, 09:59 PM IST
2 ಪ್ರತ್ಯೇಕ ಅಪಘಾತದಲ್ಲಿ ಐವರು ದಾರುಣ ಸಾವು

ಸಾರಾಂಶ

ಇಂದು [ಭಾನುವಾರ] ವಿಜಯಪುರ ಮತ್ತು ರಾಯಚೂರಿನಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. 

ವಿಜಯಪುರ/ರಾಯಚೂರು, [ಜೂ.16]: ಕಂಟೇನರ್ ಲಾರಿ ಹಾಗೂ ಏಸರ್ ಪಿಕಪ್ ನಡುವೆ ಮುಖಾಮುಖಿ‌ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಜಯಪುರ ‌ಜಿಲ್ಲೆಯ ದೇವರಹಿಪ್ಪರಗಿ ಬಳಿಯ ಎನ್ಎಚ್- 218 ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಏಸರ್ ಪಿಕಪ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಮೃತರು ಸಿಂದಗಿ ಪಟ್ಟಣದ ಮೂಲದವರು ಎಂದು ತಿಳಿದುಬಂದಿದೆ. ಆದರೆ, ಮೃತರು ಹೆಸರು ಲಭ್ಯವಿಲ್ಲ.

ಬೈಕ್​ಗೆ ಡಿಕ್ಕಿ ಹೊಡೆದ ಲಾರಿ
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮುದಬಾಳ ಕ್ರಾಸ್​ ಬಳಿ ಲಾರಿ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಅವರಲ್ಲಿ ಓರ್ವನನ್ನು ಮಸ್ಕಿಯ ಗೋಪಾಲ್​ (25) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಬೈಕ್​ ಮಸ್ಕಿಯಿಂದ ಲಿಂಗಸೂಗೂರು ಕಡೆಗೆ ಹೋಗುತ್ತಿತ್ತು. 

ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಮಸ್ಕಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

PREV
click me!

Recommended Stories

ದೇವಸ್ಥಾನಗಳಲ್ಲಿ ಸರ ಎಗರಿಸುತ್ತಿದ್ದ ತಮಿಳುನಾಡಿನ 'ಕಳ್ಳಿಯರ ಗ್ಯಾಂಗ್' ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರಿಗೆ ಹೋಗಿ ಕೆಲಸ ಹುಡುಕಿ: ಬಾಂಗ್ಲಾದೇಶಿ ಅಕ್ರಮ ನಿವಾಸಿಗಳಿಗೆ ಕರೆ ನೀಡಿದ ಮೀಯಾ ಮುಸ್ಲಿಂ ಮಹಿಳೆ