ದಶಕಗಳಿಂದಲೂ ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಕಬ್ಬು ಬೆಳೆ ಹೆಚ್ಚಾದರೂ ಸಮಸ್ಯೆ, ಕಬ್ಬು ಬೆಳೆ ಕಡಿಮೆಯಾದರೂ ಸಮಸ್ಯೆ ಎನ್ನುವಂತಾಗಿದೆ. ಹಾಗಾಗಿ ಕಬ್ಬು ಬೆಳೆಗಾರರು ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿರ ಕೋಟಿ ಮೀಸಲಿಡುವ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಎಂ. ಅಪ್ರೋಜ್ಖಾನ್
ಮದ್ದೂರು/ಮಂಡ್ಯ : ದಶಕಗಳಿಂದಲೂ ಕಬ್ಬು ಬೆಳೆಗಾರರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಕಬ್ಬು ಬೆಳೆ ಹೆಚ್ಚಾದರೂ ಸಮಸ್ಯೆ, ಕಬ್ಬು ಬೆಳೆ ಕಡಿಮೆಯಾದರೂ ಸಮಸ್ಯೆ ಎನ್ನುವಂತಾಗಿದೆ. ಹಾಗಾಗಿ ಕಬ್ಬು ಬೆಳೆಗಾರರು ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿರ ಕೋಟಿ ಮೀಸಲಿಡುವ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿಯಲ್ಲಿ 8480 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 117 ಕಿ.ಮೀ ಉದ್ದದ ಬೆಂಗಳೂರು -ರಾಷ್ಟ್ರೀಯ ಹೆದ್ದಾರಿ- 275ರ ಪ್ಯಾಕೇಜ್ ಸಮರ್ಪಣೆ ಹಾಗೂ .4130 ಕೋಟಿ ವೆಚ್ಚದಲ್ಲಿ 93 ಕಿ.ಮೀ ಉದ್ದದ ಮೈಸೂರು - ಕುಶಾಲನಗರ ವಿಭಾಗ -275ರ 4 ಪ್ಯಾಕೇಜ್ಗಳು ಸೇರಿ ಒಟ್ಟು .12 ಸಾವಿರ ಕೊಟಿಗೂ ಅಧಿಕ ಮೌಲ್ಯದ 210 ಕಿ.ಮೀ ಉದ್ದದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸಮರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆ ಅವಲಂಬಿಸಿ ಜೀವನ ನಡೆಸುವಂತಾಗಿದೆ. ಹೀಗಾಗಿ ಕಬ್ಬಿನ ಸಮಸ್ಯೆಗೆ ಯಾವುದಾದರು ಪರಿಹಾರ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಬಿಜೆಪಿ ಸರ್ಕಾರ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುವ ಮಾರ್ಗ ಕಂಡುಕೊಂಡಿತು. ಅತಿ ಹೆಚ್ಚು ಕಬ್ಬು ಉತ್ಪಾದನೆಯಾದರೆ ಎಥೆನಾಲ್ ಉತ್ಪಾದಿಸುವ ಮೂಲಕ ರೈತರಿಗೆ ಸಹಾಯ ಮಾಡಲು ನಿರ್ಧರಿಸಿದೆವು ಎಂದರು.
ಕಳೆದ ವರ್ಷ ದೇಶದ ಸಕ್ಕರೆ ಕಾರ್ಖಾನೆಗಳು 30 ಸಾವಿರ ಕೋಟಿ ಮೌಲ್ಯದ ಎಥೆನಾಲ್ ಅನ್ನು ಕಂಪನಿಗಳಿಗೆ ಮಾರಾಟ ಮಾಡಲಾಗಿದೆ. ಇದರಿಂದ ರೈತರಿಗೆ ಸರಿಯಾದ ಸಮಯಕ್ಕೆ ಹಣ ಪಾವತಿಸಲು ಸಾಧ್ಯವಾಗಿದೆ. 2013-14ರ ನಂತರ .70 ಸಾವಿರ ಕೋಟಿ ಮೌಲ್ಯದ ಎಥೆನಾಲ್ ಅನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಿ, ಆ ಹಣ ಕಬ್ಬು ಬೆಳೆಗಾರರಿಗೆ ತಲುಪುವಂತೆ ಮಾಡಿದ್ದೇವೆ ಎಂದರು.
ಈ ವರ್ಷ ಕೇಂದ್ರ ಬಜೆಟ್ನಲ್ಲಿ ಕಬ್ಬು ಬೆಳೆಗಾರರಿಗಾಗಿ ಅನೇಕ ಯೋಜನೆ ರೂಪಿಸಲಾಗಿದೆ. ಸಹಕಾರಿ ಕ್ಷೇತ್ರದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ 10 ಸಾವಿರ ಕೋಟಿ ಮೀಸಲಿಡುವುದರ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದರು.
ಬಿಜೆಪಿ ಸರ್ಕಾರ ರೈತರ ಸಣ್ಣ ಸಣ್ಣ ಸಮಸ್ಯೆಗಳನ್ನು ಶಾಶ್ವತ ವಾಗಿ ಬಗೆಹರಿಸಲು ಆದ್ಯತೆ ನೀಡುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕರ್ನಾಟಕದ ರೈತರ ಖಾತೆಗಳಿಗೆ .12 ಸಾವಿರ ಕೋಟಿಗಿಂತಲೂ ಅಧಿಕ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದ್ದು, ಅದರಲ್ಲಿ ಮಂಡ್ಯದ 2.45 ಲಕ್ಷ ರೈತರಿಗೆ .600 ಕೋಟಿ ನೀಡಿದ್ದೇವೆ ಎಂದರು.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ಕೇಂದ್ರ ಸರ್ಕಾರ .6 ಸಾವಿರ ನೀಡುತ್ತಿದ್ದರೆ, ರಾಜ್ಯ ಸರ್ಕಾರ 4 ಸಾವಿರ ರುಪಾಯಿ ಸೇರಿಸಿ ನೀಡುತ್ತಿದೆ. ಇದು ಡಬಲ್ ಎಂಜಿನ್ ಸರ್ಕಾರದಿಂದ ರೈತರಿಗೆ ಡಬಲ್ ಆದಾಯ ಸಿಗುತ್ತಿದೆ. ಅಲ್ಲದೆ, ಅವರ ಸಮಸ್ಯೆಗಳ ಪರಿಹಾರವೂ ಆಗುತ್ತಿದೆ ಎಂದರು.