ಬಾಗಲಕೋಟೆ: ಬಸ್ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿದ ಕುಡುಕ!

Suvarna News   | Asianet News
Published : Dec 19, 2019, 10:48 AM ISTUpdated : Dec 19, 2019, 03:00 PM IST
ಬಾಗಲಕೋಟೆ: ಬಸ್ ಕಂಡಕ್ಟರ್‌ಗೆ ಮನಬಂದಂತೆ ಥಳಿಸಿದ ಕುಡುಕ!

ಸಾರಾಂಶ

ಕುಡಿದ ಮತ್ತಿನಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕ| ಬಾಗಲಕೋಟೆ ತಾಲೂಕಿನ ಸಿಕ್ಕೇರಿ ಗ್ರಾಮದ ಬಳಿ ನಡೆದ ಘಟನೆ|ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಬರುತ್ತಿದ್ದ ಬಸ್‌| ರಾಂಪೂರನಿಂದ ಬಾಗಲಕೋಟೆಗೆ ಪ್ರಯಾಣಿಸುತ್ತಿದ್ದ ಕುಡುಕ ಸಂತೋಷ| 

ಬಾಗಲಕೋಟೆ(ಡಿ.19): ಸರ್ಕಾರಿ ಬಸ್‌ನಲ್ಲಿದ್ದ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಸಿಕ್ಕೇರಿ ಗ್ರಾಮದ ಬಳಿ ಇಂದು(ಗುರುವಾರ) ನಡೆದಿದೆ. ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಎಂಬುವವರ ಮೇಲೆ ಕುಡಿದ ಮತ್ತಿನಲ್ಲಿ ಸಂತೋಷ ವಾಲಿಕಾರ ಎಂಬಾತ ಹಲ್ಲೆ ನಡೆಸಿದ್ದಾನೆ. 

"

ಮುದ್ದೇಬಿಹಾಳದಿಂದ ಬಾಗಲಕೋಟೆಗೆ ಬರುತ್ತಿದ್ದ ಬಸ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ಸಂತೋಷ ಸೀಟ್‌ನಲ್ಲಿ ಮಲಗಿಕೊಂಡಿದ್ದನು ಕೊನೆಗೆ ಬಾಗಿಲ ಬಳಿ ಬಂದು ನಿಂತಿದ್ದನು. ಈ ವೇಳೆ ಈ ವೇಳೆ ಸೀಟ್ ಮೇಲೆ ಕೂರುವಂತೆ ಕಂಡಕ್ಟರ್ ಕಾಶೀನಾಥ್ ಅವರು ಹೇಳಿದ್ದರು.  ಕುಡುಕ ಸಂತೋಷ ರಾಂಪೂರನಿಂದ ಬಾಗಲಕೋಟೆಗೆ ಆಗಮಿಸುತ್ತಿದ್ದನು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಜಗಳವಾಡಿಕೊಂಡ ಪಾನಮತ್ತ ಸಂತೋಷ ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಅವರ ಮುಖದ ಮೇಲೆ ರಕ್ತ ಬರುವ ಹಾಗೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕಂಡಕ್ಟರ್ ಕಾಶೀನಾಥ್ ಭಜಂತ್ರಿ ಅವರು ಬಾಗಲಕೋಟೆ ಗ್ರಾಮೀಣ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿ ಸಂತೋಷನನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. 

PREV
click me!

Recommended Stories

ಬೆಂಗಳೂರಲ್ಲಿ ಇನ್ನು ಏರ್ ಶೋ ನಡೆಯಲ್ಲ, ಅರಣ್ಯ ಇಲಾಖೆಯಿಂದ ಭೂಮಿ ವಶಪಡಿಸಲು ನಿರ್ಧಾರ
ಇಂದು ಸಿಂಧನೂರು ಪಟ್ಟಣಕ್ಕೆ ಕಿಚ್ಚ ಸುದೀಪ್! ಅಭಿಮಾನಿಗಳಿಗೆ ಹಬ್ಬ, ಏನಿದು, ಎಲ್ಲಿದೆ ಕಾರ್ಯಕ್ರಮ? ಇಲ್ಲಿದೆ ವಿವರ