ಕೊರೋನಾ ಮಹಾಮಾರಿ : ತಜ್ಞ ವೈದ್ಯ ಸಾವು

Kannadaprabha News   | Asianet News
Published : Apr 20, 2021, 08:28 AM IST
ಕೊರೋನಾ ಮಹಾಮಾರಿ : ತಜ್ಞ ವೈದ್ಯ ಸಾವು

ಸಾರಾಂಶ

ಕೊರೋನಾದಿಂದ ತಜ್ಞ ವೈದ್ಯರೋರ್ವರು ನಿಧನರಾಗಿದ್ದಾರೆ. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ವೈದ್ಯರು ಮೃತಪಟ್ಟಿದ್ದಾರೆ. 

ಚನ್ನಪಟ್ಟಣ (ಏ.20): ಕೊರೋನಾದಿಂದಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮಹೇಶ್‌ ಭಾನುವಾರ ಕೊನೆಯುಸಿರೆಳೆದಿದ್ದಾರೆ.

ಭಾನುವಾರ ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾದ ಇವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ವಿಫಲಗೊಂಡು ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. 

ಈ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ಮಂಜುನಾಥ್‌ ಕೋವಿಡ್‌ನಿಂದಾಗಿ ಕೊನೆಯುಸಿ ರೆಳೆದಿದ್ದರು. ಅವರ ನಿಧನದಿಂದ ಖಾಲಿಯಾಗಿದ್ದ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿತ್ತು. ಇದೀಗ ಇವರು ಸಹ ಕೊರೋನಾದಿಂದ ಸಾವಿಗೀಡಾಗಿರುವುದು ದುರ್ದೈವ.

ಬೀದರ್‌, ರಾಮನಗರದ 2 ಗ್ರಾಮ ಸ್ವಯಂ ಲಾಕ್‌ಡೌನ್‌! ...

ಸಚಿವರ ಸಂತಾಪ:  ಕೋವಿಡ್‌ನಿಂದ ಸಾವಿಗೀಡಾಗಿರುವ ವೈದ್ಯ ಡಾ.ಮಹೇಶ್‌ ಅವರ ನಿಧನಕ್ಕೆ ಆರೋಗ್ಯ ಸಚಿವ ಸುಧಾಕರ್‌, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ತಮ್ಮ ಅಧಿಕೃತ ಟ್ವೀಟರ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಕೋವಿಡ್‌ ವಾರಿಯರ್‌ ಆಗಿ ಕೆಲಸ ಮಾಡುತ್ತಿದ್ದ ವೈದ್ಯರ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

PREV
click me!

Recommended Stories

ಪ್ರತಿಭಾವಂತನ ಸ್ಥಾನವನ್ನು ನೂರು ಕಂಪ್ಯೂಟರ್ ತುಂಬಿಸಲಾಗದು : ಇಸ್ರೋ ವಿಜ್ಞಾನಿ ಡಾ.ದಾರುಕೇಶ
ಅರ್ಧಕ್ಕೆ ನಿಂತ ಗ್ರಾಮದ ದೇಗುಲ ನಿರ್ಮಾಣಕ್ಕೆ ₹2.50 ಲಕ್ಷ ನೀಡಿದ 850 ‘ಗೃಹಲಕ್ಷ್ಮೀ’ಯರು