ಅಕ್ಟೋಬರ್ ಕೊನೆ ವಾರದಲ್ಲಿ ಶುಭ ಸುದ್ದಿ : ಚುನಾವಣೆ ನಡೆಯೋದೆ ಡೌಟ್ ಎಂದ ಮುಖಂಡ

By Kannadaprabha NewsFirst Published Sep 30, 2019, 4:09 PM IST
Highlights

ರಾಜ್ಯದಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ. ಆದರೆ ಉಪ ಚುನಾವಣೆ ನಡೆಯುವುದೇ ಡೌಟ್ ಎಂದು ಅನರ್ಹ ಶಾಸಕರೋರ್ವರು ಹೇಳಿದ್ದಾರೆ.

ಚಿಕ್ಕಬಳ್ಳಾಪುರ [ಸೆ.30]: ರಾಜ್ಯದಲ್ಲಿ ಘೋಷಣೆಯಾಗಿದ್ದ ಉಪ ಚುನಾವಣೆ ಡಿಸೆಂಬರ್ 5ಕ್ಕೆ ಮುಂದೂಡಿಕೆಯಾಗಿದೆ. ಆದರೆ ಉಪ ಚುನಾವಣೆ ಬರುವುದೇ ಅನುಮಾನ ಎಂದು ಅನರ್ಹ ಶಾಸಕ ಸುಧಾಕರ್ ಹೇಳೀದರು.

ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಮಾತನಾಡಿದ ಸುಧಾಕರ್ ಸುಪ್ರೀಂಕೋರ್ಟಲ್ಲಿ ರಮೇಶ್ ಕುಮಾರ್ ಅವರ ಆದೇಶ ಬಿದ್ದು ಹೋಗುತ್ತದೆ. ಅನರ್ಹತೆ ಅರ್ಹತೆಯಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅಕ್ಟೋಬರ್ ಕೊನೆ ವಾರದಲ್ಲಿ ಒಳ್ಳೆಯ ಸುದ್ದಿಯೊಂದು ಬರಲಿದೆ ಎಂದ ಸುಧಾಕರ್ ಸ್ಪೀಕರ್ ರಮೇಶ್ ಕುಮಾರ್ ಕಾನೂನು ಬಾಹಿರ ಕ್ರಮ ಕೈಗೊಂಡಿದ್ದಾರೆ ಎಂದು ಶಾಸಕ ಸುಧಾಕರ್ ಹೇಳಿದರು.

click me!