'ಆರಗ ಜ್ಞಾನೇಂದ್ರಗೆ ಮಂತ್ರಿ ಸ್ಥಾನ'

By Kannadaprabha NewsFirst Published Oct 9, 2020, 2:59 PM IST
Highlights

ರಾಜ್ಯದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮುಖಂಡರೋರ್ವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸದ್ದಾಗುತ್ತಿದೆ

ತೀರ್ಥಹಳ್ಳಿ (ಅ.09) : ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನೆಗಾಗಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸಿ.ಟಿ.ರವಿ ನೇಮಕಗೊಂಡಿದ್ದು, ಅವರ ಸಚಿವ ಸ್ಥಾನ ತೆರವಾಗಿದೆ. ಈ ತೆರವಾಗಿರುವ ಸ್ಥಾನವನ್ನು ಆರಗ ಜ್ಞಾನೇಂದ್ರಗೆ ನೀಡುವಂತೆ ಪ್ರಗತಿಪರ ಚಿಂತಕ ನೆಂಪೆ ದೇವರಾಜ್‌ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಒತ್ತಾಯಿಸಿದ್ದಾರೆ. 

ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕಕರೆಂದು ಆರಗ ಜ್ಞಾನೇಂದ್ರ ಗುರುತಿಸಿಕೊಂಡಿದ್ದಾರೆ. 

ಕೊರೋನಾ ಪ್ರಕರಣಗಳು ಹೆಚ್ಚಾಗಿರುವ 10 ಜಿಲ್ಲೆಗಳ DC, ACಗಳಿಗೆ ಸಿಎಂ ಟಾಸ್ಕ್..! .

ಮಂತ್ರಿ ಸ್ಥಾನಕ್ಕೆ ಇತರ ಶಾಸಕರಂತೆ ಲಾಬಿ, ಗುಂಪುಗಾರಿಕೆ, ಒತ್ತಡ ತಂತ್ರಗಳನ್ನು ಹಾಕದಿರುವುದನ್ನೇ ದೌರ್ಬಲ್ಯ ಎಂದು ಪರಿಗಣಿಸುತ್ತಿರುವ ಪ್ರಸ್ತುತ ರಾಜಕಾರಣದಲ್ಲಿ ಆರಗ ಬಹುಭಿನ್ನವಾಗಿ ಕಾಣುತ್ತಾರೆ. ಜ್ಞಾನೇಂದ್ರ ಬೆಂಬಲಿಗರೂ ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಡ ಹೇರಲಿ ಎಂದು ನೆಂಪೆ ದೇವರಾಜ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

click me!