ರಾಯಚೂರು: ರಾಯರ ಮೂಲಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ

Published : Sep 30, 2022, 09:30 PM IST
ರಾಯಚೂರು: ರಾಯರ ಮೂಲಬೃಂದಾವನಕ್ಕೆ ನವರತ್ನ ಕವಚ ಸಮರ್ಪಣೆ

ಸಾರಾಂಶ

ನವರತ್ನ ಕವಚವನ್ನು ರಾಯರಿಗೆ ದೇಣಿಗೆಯಾಗಿ ನೀಡಿದ ಹೈದರಾಬಾದ್‌ ಮೂಲದ ಎ.ವೆಂಕಟರೆಡ್ಡಿ ಮತ್ತು ಕುಟುಂಬಸ್ಥರು 

ರಾಯಚೂರು(ಸೆ.30): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಭಕ್ತರೊಬ್ಬರು ಶ್ರೀಗುರುಸಾರ್ವಭೌಮರ ಮೂಲಬೃಂದಾವನಕ್ಕೆ ನವರತ್ನ ಕಚಿತ ಕವಚವನ್ನು ದೇಣಿಗೆಯಾಗಿ ನೀಡಿದ್ದಾರೆ.

ಹೈದರಾಬಾದ್‌ ಮೂಲದ ಎ.ವೆಂಕಟರೆಡ್ಡಿ ಮತ್ತು ಕುಟುಂಬಸ್ಥರು ಈ ನವರತ್ನ ಕವಚವನ್ನು ರಾಯರಿಗೆ ದೇಣಿಗೆಯಾಗಿ ನೀಡಿದ್ದು, ದಾನಿಗಳಿಂದ ಪಡೆದ ಆ ನವರತ್ನ ಕಚಿತ ಕವನವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಶ್ರೀಗುರುರಾಯರ ಮೂಲಬೃಂದಾವನಕ್ಕೆ ಅಲಂಕರಿಸಿ, ಪೂಜೆಯನ್ನು ನೆರವೇರಿಸುವುದರ ಮೂಲಕ ಸಮರ್ಪಿಸಿದರು.

ಮಂತ್ರಾಲಯದಲ್ಲಿ ಕರ್ನಾಟಕ ಛತ್ರ ಲೋಕಾರ್ಪಣೆ

ಹುಂಡಿಯಲ್ಲಿ 1.64 ಕೋಟಿ ಸಂಗ್ರಹ:

ಶ್ರೀಮಠದಲ್ಲಿ ಗುರುವಾರ ಸೆಪ್ಟಂಬರ್‌ ಮಾಯೆಯ ಹುಂಡಿಯಲ್ಲಿ 1 ಕೋಟಿ 64 ಲಕ್ಷ 36,626 ರು. ನಗದು,ಚಿನ್ನಾಭರಣವು ಸಂಗ್ರಹವಾಗಿದೆ. ಮಠದ ಅಧಿಕಾರಿ,ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸೇರಿಕೊಂಡು ಹುಂಡಿಯಲ್ಲಿದ್ದ ನಗದು, ಚಿನ್ನಾಭರಣವನ್ನು ಲೆಕ್ಕಿಸಿದ್ದು ಈ ವೇಳೆ 1 ಕೋಟಿ 61 ಲಕ್ಷ 05,626 ಮೊತ್ತದ ನೋಟು, 3 ಲಕ್ಷ 31 ಸಾವಿರ ನಾಣ್ಯ ಮತ್ತು 62 ಗ್ರಾಂ ಚಿನ್ನ, 1448 ಗ್ರಾಮ ಬೆಳ್ಳಿಯನ್ನು ಭಕ್ತರು ರಾಯರಿಗೆ ಸಮರ್ಪಿಸಿದ್ದಾರೆ.
 

PREV
click me!

Recommended Stories

ಪೊಲೀಸ್ ಸಿಬ್ಬಂದಿಗೆ ಬಂದೂಕು ಹೊರಿಸಿ ರಣಬಿಸಿಲಲ್ಲಿ ನಿಲ್ಲಿಸಿದ್ದ PSI ನೇತ್ರಾವತಿಗೆ, ಕೇವಲ ಎತ್ತಂಗಡಿ ಶಿಕ್ಷೆ!
ಚಿಕ್ಕಮಗಳೂರಲ್ಲಿ ಮತ್ತೊಬ್ಬ ಕೇರಳ ಬಾಲಕಿ ನಾಪತ್ತೆಯಾಗಿ 2ನೇ ದಿನ: ಸಚಿವ ಈಶ್ವರ ಖಂಡ್ರೆ ಖಡಕ್ ಆದೇಶ! ಏನಿದೆ ಇದರಲ್ಲಿ?