ಸಂಸದ ಉಮೇಶ ಜಾಧವ್‌ ಮೇಲೆ ಹಲ್ಲೆಗೆ ಯತ್ನ: ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲು

Kannadaprabha News   | Asianet News
Published : May 17, 2020, 02:12 PM ISTUpdated : May 17, 2020, 02:16 PM IST
ಸಂಸದ ಉಮೇಶ ಜಾಧವ್‌ ಮೇಲೆ ಹಲ್ಲೆಗೆ ಯತ್ನ: ಕಾಂಗ್ರೆಸ್‌ ಮುಖಂಡರ ವಿರುದ್ಧ ದೂರು ದಾಖಲು

ಸಾರಾಂಶ

ಸೀಲ್‌ಡೌನ್‌ ಪ್ರದೇಶದಲ್ಲಿ ಬ್ಯಾರಿಕೇಡ್‌ ತೆರವುಗೊಳಿಸಿ ಸೋಂಕು ಮುಕ್ತ ಪ್ರದೇಶವೆಂದು ಘೋಷಿಸಲು ಹೋಗಿದ್ದ  ಸಂಸದ ಡಾ.ಉಮೇಶ ಜಾಧವ್‌ ಜೊತೆ ವಾಗ್ವಾದ| ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು| ಕಾಂಗ್ರೆಸ್‌ ಮುಖಂಡರು ಘೇರಾವ್‌ ಹಾಕಿ ಜಾಧವ್‌ ವಿರುದ್ಧ ಘೋಷಣೆ ಕೂಗಿದ್ದರು|

ಕಲಬುರಗಿ(ಮೇ.17): ಜಿಲ್ಲೆಯ ವಾಡಿ ಸೀಲ್‌ಡೌನ್‌ ಪ್ರದೇಶದಲ್ಲಿ ಬ್ಯಾರಿಕೇಡ್‌ ತೆರವುಗೊಳಿಸಿ ಸೋಂಕು ಮುಕ್ತ ಪ್ರದೇಶವೆಂದು ಘೋಷಿಸಲು ಹೋಗಿದ್ದ ಸಂದರ್ಭದಲ್ಲಿ ಸಂಸದ ಡಾ.ಉಮೇಶ ಜಾಧವ್‌ ಜೊತೆ ವಾಗ್ವಾದಕ್ಕಿಳಿದು ಘೇರಾವ್‌ ಹಾಕಿದ್ದ ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಂಸದ ಉಮೇಶ ಜಾಧವ್‌ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂಬ ದೂರಿನಡಿಯಲ್ಲಿ ಪುರಸಭೆ ಸದಸ್ಯ ಶರಣು ನಾಟೀಕಾರ್‌, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಮೆಹಬೂಬ್‌ ಸಾಹೇಬ್‌ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

'ನಮ್ಮನ್ನ ಬಿಟ್ಬಿಡಿ, ಕ್ವಾರಂಟೈನ್‌ ಮಾಡಿದ್ರೆ ಆತ್ಮಹತ್ಯೆ ಮಾಡ್ಕೊಳ್ತೇವೆ'

ಜಿಪಂ ಕಲಬುರಗಿ ಸದಸ್ಯ ಅರವಿಂದ ಚವ್ಹಾಣ್‌ ನೀಡಿದ ದರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 10 ರಂದು ವಾಡಿ ಪಟ್ಟಣದಲ್ಲಿ ಈ ಘಟನೆ ಸಂಭವಿಸಿತ್ತು. ಕಾಂಗ್ರೆಸ್‌ ಮುಖಂಡರು ಘೇರಾವ್‌ ಹಾಕಿ ಜಾಧವ್‌ ವಿರುದ್ಧ ಘೋಷಣೆ ಸಹ ಕೂಗಿದ್ದರು.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC