'ಜನರಿಗೆ ಪ್ರತಿ ಸಂಜೆ ಸೂಪರ್ ಸ್ಪೆಷಾಲಿಟಿ ಸೌಕರ್ಯದೊಂದಿಗೆ ಉಚಿತ ಆರೋಗ್ಯ ಸೇವೆ'

By Kannadaprabha NewsFirst Published Jan 24, 2021, 11:44 AM IST
Highlights

ಸೂಪರ್‌ ಸ್ಪೆಷಾಲಿಟಿ ಸೌಕರ್ಯಗಳೊಂದಿಗೆ ಜನರಿಗಾಗಿ ಉಚಿತ ಸಂಜೆ ಕ್ಲಿನಿಕ್ ಆರಂಭ ಮಾಡಲಾಗಿದೆ. ಸಿಎಂ ಬಿ ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ. 

 ತುಮಕೂರು (ಜ.24):  ಸೂಪರ್‌ ಸ್ಪೆಷಾಲಿಟಿ ಸೌಕರ್ಯಗಳೊಂದಿಗೆ ಆರಂಭವಾಗಿರುವ ಸಿದ್ಧಗಂಗಾ ಆಸ್ಪತ್ರೆ ಪ್ರತಿದಿನ ಸಂಜೆ ಉಚಿತ ಕ್ಲಿನಿಕ್‌ ತೆರೆದಿರುವುದು ಶ್ಲಾಘನೀಯ ಕೆಲಸವಾಗಿದೆ. ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಪಂಚಾಯಿತಿ ಹಂತದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸುತ್ತಿರುವುದು ಮಾದರಿ ಕೆಲಸವಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಅವರು ಸಿದ್ಧಗಂಗಾ ಮಠದಲ್ಲಿ ನಡೆದ ಲಿಂಗೈಕ್ಯ ಶಿವಕುಮಾರ ಶ್ರೀಗಳ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮದ ನಂತರ ಮಾತನಾಡಿ, ಈ ಒಂದು ಮಹಾತ್ಕಾರ್ಯಕ್ಕೆ ಸಿಎಂ ಯಡಿಯೂರಪ್ಲನವರು ಚಾಲನೆ ನೀಡಿರುವ ಶುಭಾರಂಭದ ಸಂಕೇತವಾಗಿದೆ ಎಂದರು.

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ...

ಶ್ರೀಗಳು ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಸದಾ ಚಿಂತಿಸುತ್ತಿದ್ದವರು, ಅವರ ಆರೋಗ್ಯ ಗ್ರಾಮವನ್ನ ನನಸು ಮಾಡಲು ಸಿದ್ಧಗಂಗಾ ಆಸ್ಪತ್ರೆ ಸೂಪರ್‌ ಸ್ಪೆಷಾಲಿಟಿಯ ಸೇವೆಯನ್ನು ಉಚಿತ ಸಂಜೆ ಕ್ಲಿನಿಕ್‌ ಮುಖಾಂತರ ಸಾರ್ವಜನಿಕರ ಸೇವೆಗೆ ಮುಂದಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ.ಎಸ್‌.ಪರಮೇಶ್‌ ತಿಳಿಸಿದರು.

click me!