ಸಿಎಂ ಯಡಿಯೂರಪ್ಪ ಮನೆಗೆ ಹೊಸ ಜೀವದ ಆಗಮನ, ಎಲ್ಲೆಲ್ಲೂ ಸಂಭ್ರಮ

Published : Jun 25, 2020, 11:34 PM ISTUpdated : Jun 27, 2020, 04:33 PM IST
ಸಿಎಂ ಯಡಿಯೂರಪ್ಪ ಮನೆಗೆ ಹೊಸ ಜೀವದ ಆಗಮನ, ಎಲ್ಲೆಲ್ಲೂ ಸಂಭ್ರಮ

ಸಾರಾಂಶ

ಸಿಎಂ ಬಿಎಸ್ ಯಡಿಯೂರಪ್ಪ ಮನೆಗೆ ಹೊಸ ಸದಸ್ಯ ಆಗಮನ/ ಗುರುವಾರ ಮುದ್ದಾದ ಕರುವಿಗೆ ಜನ್ಮ ನೀಡಿದ ಬಿಎಸ್‌ವೈ ಮನೆಯ ಹಸು/ ಸಂತಸ ಹಂಚಿಕೊಂಡ ವಿಜಯೇಂದ್ರ

ಬೆಂಗಳುರು(ಜೂ 25 ) ಮುಖ್ಯಮಂತ್ರಿ  ಯಡಿಯೂರಪ್ಪ ಅವರ ಮನೆಗೆ ಹೊಸ ಜೀವದ ಆಗಮನವಾಗಿದೆ. ಯಡಿಯೂರಪ್ಪ ಪ್ರೀತಿಯಿಂದ ಸಾಕಿರುವ ಹಸು ಗುರುವಾರ ಕರುವಿಗೆ ಜನ್ಮ ನೀಡಿದೆ.

ತಾಯಿ ಗೋವು ಮತ್ತು ಕರು ಆರೋಗ್ಯದಿಂದಿದ್ದು, ಮನೆಯಲ್ಲಿ ಸಂಭ್ರಮ ಮನೆಮಾಡಿದೆ ಎಂದು ಬಿಎಸ್‌ವೈ ಪುತ್ರ ವಿಜಯೇಂದ್ರ ಸಂತಸ ಹಂಚಿಕೊಂಡಿದ್ದಾರೆ. ವಿಜಯೇಂದ್ರ ವಿಡಿಯೋ ಒಂದನ್ನು ಶೇರ್ ಮಾಡಿದ್ದು ತಾಯಿ ಮುದ್ದಾದ ಕರುವಿನ ಬಾಂಧವ್ಯ ಕಾಣಬಹುದಾಗಿದೆ.  ಗೀರ್ ತಳಿಯ ಆಕಳುಗಳನ್ನು ಎಂಎಲ್‌ಎ ವಿಶ್ವನಾಥ್ ಬಿಎಸ್‌ವೈ ಅವರಿಗೆ ನೀಡಿದ್ದರು.

"

ಮುದ್ದಾದ ಕರುವಿನೊಂದಿಗೆ ರಾಜಾಹುಲಿ ಆಟ

ಯಡಿಯೂರಪ್ಪ ಕರುವಿನೊಂದಿಗೆ ಆಡುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು.  ದೇಶಿ ತಳಿಯ ಹಸುಗಳನ್ನು ಸಿಎಂ ತಮ್ಮ ಕಾವೇರಿ ನಿವಾಸದಲ್ಲಿ ಸಾಕಿ ಸಲಹುತ್ತಿದ್ದಾರೆ.  ದೇಶಿ ತಳಿಯ ಹಸುಗಳನ್ನು ಸಾಕಬೇಕು ಎಂಬ ಕೂಗು ಸಹ ಜೋರಾಗಿಯೇ ಕೇಳಿಬಂದಿತ್ತು.  ನಮ್ಮ ದೇಶದ ಮೂಲ ತಳಿಗಳನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

 



 

PREV
click me!

Recommended Stories

ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!