'SP ರಾಧಿಕಾ 'ಕೈ' ಧುರೀಣರ ಸಂಬಂಧಿ, ಅಂಥವರಿಂದ ನಾವೇನು ನಿರೀಕ್ಷಿಸಲು ಸಾಧ್ಯ'

By Suvarna NewsFirst Published Feb 1, 2020, 12:32 PM IST
Highlights

ಚಿತ್ರದುರ್ಗ ಜಿಲ್ಲೆಯ ನೂತನ ಎಸ್ಪಿ ಆಗಿ ಜಿ. ರಾಧಿಕಾ ನೇಮಕ| ರಾಧಿಕಾ ನೇಮಕಕ್ಕೆ ಗೂಳಿಹಟ್ಟಿ ಶೇಖರ್ ಅಸಮಾಧಾನ| ರಾಧಿಕಾ ನಮ್ಮ ಜಿಲ್ಲೆಯ ಕಾಂಗ್ರೆಸ್ ಧುರೀಣರೊಬ್ಬರ ಸಂಬಂಧಿ| ಅಂಥ ಎಸ್ಪಿಯಿಂದ ನಾವೇನು ನಿರೀಕ್ಷೆ ಮಾಡಲಾಗುತ್ತದೆ| 

ಚಿತ್ರದುರ್ಗ(ಫೆ.01): ಚಿತ್ರದುರ್ಗ ಜಿಲ್ಲೆಯ ನೂತನ ಎಸ್ಪಿ ಆಗಿ ಜಿ. ರಾಧಿಕಾ ಅವರು ನೇಮಕವಾಗಿದ್ದಕ್ಕೆ ಜಿಲ್ಲೆಯ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿ.ರಾಧಿಕಾ ನಮ್ಮ ಜಿಲ್ಲೆಯ ಕಾಂಗ್ರೆಸ್ ಧುರೀಣರೊಬ್ಬರ ಸಂಬಂಧಿಯಾಗಿದ್ದಾರೆ. ಅಂಥ ಎಸ್ಪಿ ಅವರಿಂದ ನಾವೇನು ನಿರೀಕ್ಷೆ ಮಾಡಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

ಚಿತ್ರದುರ್ಗ: ಓಬ್ಬವ್ವನ ನಾಡಲ್ಲಿ ವನಿತೆಯರ ದರ್ಬಾರ್, ಉನ್ನತ ಹುದ್ದೆಯಲ್ಲಿ ಮಹಿಳೆಯರು!

ನಮ್ಮದೇ ಸರ್ಕಾರ ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರು ಸೂಚಿಸಿದ್ದ ಎಸ್ಪಿ ಹಾಕಿಲ್ಲ. ನಾವು ಜನಗಳಿಗೆ ಸ್ಪಂದಿಸಲಾಗದ ಸ್ಥಿತಿ ನಿರ್ಮಾಣ ಆಗುತ್ತಿದೆ.ಸಣ್ಣ ಪುಟ್ಟ ಪ್ರಕರಣಗಳಲ್ಲೂ ನಾವು ಜನರಿಗೆ ಸಹಾಯ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ವಿಚಾರದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಹತ್ತಿದ ಏಣಿ ಕಾಲಲ್ಲಿ ತಳ್ಳುವುದು ಒಳ್ಳೆಯದಲ್ಲ. ಬಿಜೆಪಿ ಸರ್ಕಾರ ರಚನೆಗಾಗಿ ಬಂದ 17 ಜನರಿಗೆ ಮಂತ್ರಿಗಿರಿ ಕೊಡಬೇಕಾಗುತ್ತದೆ ಎಂದಿದ್ದಾರೆ.

click me!